ಅಸ್ಸಾಮಿನ ಕಾರ್ಮಿಕ ಮೃತ್ಯು
ಕೊಲ್ಲೂರು, ಅ. 2: ತೀವ್ರ ಜ್ವರದಿಂದ ಬಳಲುತ್ತಿದ್ದ ಅಸ್ಸಾಮಿನ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಅ.2ರಂದು ಬೆಳಗಿನ ಜಾವ ನಡೆದಿದೆ.
ಮೃತರನ್ನು ಅಸ್ಸಾಮ್ ಮೂಲದ ಅರ್ಮನ್ ಉರಾಂಗ್ (21) ಎಂದು ಗುರುತಿಸಲಾಗಿದೆ.
ಹೊಸೂರು ಗ್ರಾಮ ಕದಳಿ ಎಂಬಲ್ಲಿರುವ ರಮಾನಂದ ಮದ್ಯಸ್ಥ ಎಂಬವರ ಮನೆಯಲ್ಲಿ ತೋಟದ ಕೆಲಸ ಮಾಡುತ್ತಿದ್ದ ಇವರು, ಜ್ವರ ದಿಂದ ಬಳಲುತ್ತಿದ್ದರು. ರಾತ್ರಿ ಜ್ವರ ಉಲ್ಬಣಗೊಂಡು ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story