ಮಂಗಳೂರು ಸಿಟಿ ಮಾರ್ಕೆಟ್ ಕಮರ್ಷಿಯಲ್ ಕಾಂಪ್ಲೆಕ್ಸ್ ಓನರ್ಸ್ ಅಸೋಸಿಯೇಶನ್ ಮಹಾಸಭೆ
ಮಂಗಳೂರು, ಅ.6: ಮಂಗಳೂರು ಸಿಟಿ ಮಾರ್ಕೆಟ್ ಕಮರ್ಷಿಯಲ್ ಕಾಂಪ್ಲೆಕ್ಸ್ ಓನರ್ಸ್ ಅಸೋಸಿಯೇಶನ್ನ ವಾರ್ಷಿಕ ಮಹಾಸಭೆ ಕಾಂಪ್ಲೆಕ್ಸ್ನ ನೆಲ ಅಂತಸ್ತಿನ ಬೈಕ್ ಪಾರ್ಕ್ ಹತ್ತಿರ ಸೋಮವಾರ ನಡೆಯಿತು.
ಅಸೋಸಿಯೇಶನ್ನ 2021-22ನೇ ಸಾಲಿನ ಅಧ್ಯಕ್ಷರಾಗಿ ಎ.ರಹೀಂ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎ.ರಹೀಂ, ಕಳೆದ ಕೋವಿಡ್ ಸಂದರ್ಭದಲ್ಲೂ ಅಧ್ಯಕ್ಷನಾಗಿ ನಿಶ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಮತ್ತೊಮ್ಮೆ ಅಧ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಚಿರಋಣಿ ಎಂದರು.
ಅಸೋಸಿಯೇಶನ್ನ ನೂತನ ಕಾರ್ಯದರ್ಶಿಯಾಗಿ ಕೆ.ಇಬ್ರಾಹಿಂ ಭಾರತ್, ಕೋಶಾಧಿಕಾರಿಯಾಗಿ ವಿಲ್ಮಾ ಡಿಸೋಜ, ಸದಸ್ಯರಾಗಿ ಸೂರಜ್ ಕುಮಾರ್, ಯಶವಂತ್ ರಾವಲ್, ಅಬ್ಬಾಸ್, ಇಕ್ಬಾಲ್ ಅಂಬರ್, ಹೇಮಲತಾ, ಪ್ರಭಾತ್ ಸಿಂಗ್ ಪುರೋಹಿತ್, ಬಾಬು ಲಾಲ್ ಚೌಧರಿ, ಲಾಲ್ ಕಾಲು ರಾಮ್ ರಾಜ್ ಪುರೋಹಿತ್ ಅವರನ್ನು ಆಯ್ಕೆ ಮಾಡಲಾಯಿತು.
ಕಟ್ಟಡದ ಪ್ರಾಯೋಜಕ, ಚಾರ್ಟೆಡ್ ಅಕೌಂಟೆಂಟ್ ಝಮೀರ್ ಅಂಬರ್ ಮತ್ತು ಮಂಗಳೂರು ಸಿಟಿ ಮಾರ್ಕೆಟ್ ಕಮರ್ಷಿಯಲ್ ಕಾಂಪ್ಲೆಕ್ಸ್ನ ಅಂಗಡಿ ಮಾಲಕ ಸೂರಜ್ ಕುಮಾರ್ ಅವರನ್ನು ಆದಂ ಮತ್ತು ಬಿಲ್ಡರ್ ಅನಿವಾಸಿ ಉದ್ಯಮಿ ಶರೀಫ್ ಮೂಡಬಿದ್ರೆ ಸನ್ಮಾನಿಸಿದರು. ಕೋಶಾಧಿಕಾರಿ ವಿಲ್ಮಾ ಡಿಸೋಜ ವಾರ್ಷಿಕ ವರದಿ ಮಂಡಿಸಿದರು.