ಕೋಡಿಕಲ್: ಕಾರು, ಟೆಂಪೋದ ಗಾಜಿಗೆ ಹಾನಿ
ಮಂಗಳೂರು, ನ.19: ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಕಲ್ನಲ್ಲಿ ಶುಕ್ರವಾರ ಮುಂಜಾವ ಕಾರು ಮತ್ತು ಟೆಂಪೊದ ಗಾಜನ್ನು ಮರದ ದೊಣ್ಣೆಯಿಂದ ಒಡೆದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಕೋಯಿಕೋಡ್ನ ಅಬ್ದುಲ್ ನಿಸಾರ್ (46) ಬಂಧಿತ ಆರೋಪಿಯಾಗಿದ್ದಾನೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈತ ಏಕಾಏಕಿ ವಾಹನಗಳ ಗಾಜು ಒಡೆದಿದ್ದು ಇದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.
Next Story