ಡಿ. 2: ಕರಾವಳಿ ಜಿಲ್ಲೆಗಳಿಗೆ ರಾಜ್ಯಪಾಲರ ಪ್ರವಾಸ
ಮಂಗಳೂರು, ಡಿ.1: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಡಿ.2ರಿಂದ 5ರವರೆಗೆ ದ.ಕ. ಮತ್ತು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ.
ಡಿ.2ರಂದು ಬೆಂಗಳೂರಿನಿಅದ ವಿಮಾನದ ಮೂಲಕ ಹೊರಟು ಬೆಳಗ್ಗೆ 10:50ಕ್ಕೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 12:30ಕ್ಕೆ ಧರ್ಮಸ್ಥಳಕ್ಕೆ ತೆರಳಿ 12.45ಕ್ಕೆ ಸನ್ನಿಧಿ ಗೆಸ್ಟ್ ಹೌಸ್ಗೆ ಆಗಮಿಸುವರು. 12:57ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯ ಬೀಡು ನಿವಾಸಕ್ಕೆ ಭೇಟಿ ನೀಡುವರು. 1:17ಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವರು. 1:42ಕ್ಕೆ ಅನ್ನಪೂರ್ಣ ಊಟದ ಹಾಲ್ಗೆ ಮತ್ತು 2:02ಕ್ಕೆ ಸನ್ನಿಧಿ ಗೆಸ್ಟ್ ಹೌಸ್ಗೆ ಆಗಮಿಸುವರು. 3:18ಕ್ಕೆ ಮಂಜೂಷಾ ಮ್ಯೂಸಿಯಂಗೆ ಭೇಟಿ ನೀಡುವರು. ಸಂಜೆ 4:03ಕ್ಕೆ ಕಾರ್ ಮ್ಯೂಸಿಯಂಗೆ ಆಗಮಿಸುವರು.
ಸಂಜೆ 5:05ಕ್ಕೆ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸುವರು. ಸಂಜೆ 6:15ಕ್ಕೆ ಧರ್ಮಸ್ಥಳದಿಂದ ಹೊರಟು 7:45ಕ್ಕೆ ಉಡುಪಿಯ ಸರ್ಕ್ಯೂಟ್ ಹೌಸ್ಗೆ ತೆರಳಿ ವಾಸ್ತವ್ಯ ಮಾಡುವರು ಎಂದು ಪ್ರಕಟನೆ ತಿಳಿಸಿದೆ.