ಯುಎಇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಅನಿವಾಸಿ ಕನ್ನಡಿಗರ ಒಕ್ಕೂಟದಿಂದ ರಕ್ತದಾನ ಶಿಬಿರ
ದುಬೈ : ಯುಎಇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಅನಿವಾಸಿ ಕನ್ನಡಿಗರ ಒಕ್ಕೂಟ ವತಿಯಿಂದ ಅಬುಧಾಬಿ ಖಾಲಿದಿಯ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೇರ್ ಶಾ ಮತ್ತು ಅವರ ಪತ್ನಿ ಡಾ. ನಾಝ್ ಭಾಗವಹಿಸಿ ರಕ್ತದಾನ ಮಾಡಿದ ಯುವಕ ರನ್ನು ಅಭಿನಂದಿಸಿದರು.
ನಂತರ ಶೇರ್ ಶಾ ಮಾತನಾಡುತ್ತಾ ಇನ್ನಷ್ಟು ಇಂತಹ ಸಾಮಾಜಿಕ ಕಾರ್ಯಕ್ರಮ ನಡೆಸಲು ಕರೆ ಕೊಟ್ಟರು. ಒಂದು ರಾಜ್ಯದ ಸಂಸ್ಕೃತಿ, ಅಭಿರುಚಿ ಅರಿಯಲು ಭಾಷೆಯ ಅಗತ್ಯತೆ ವಿವರಿಸಿ ಸಮಯ ಹೊಂದಿಸಿ ಅರಬಿ ಹಾಗೂ ಇನ್ನಿತರ ಭಾಷೆ ಕಲಿಯಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಇಕ್ಬಾಲ್ ಪಾಂಡೇಶ್ವರ ವಹಿಸಿದ್ದರು. ಸಾಮಾಜಿಕ ಸೇವೆಯ ಮನಗಂಡು ಅದರ ಗೌರವಾರ್ಥ ಶೇರ್ ಶಾ, ಡಾ. ನಾಝ್ ಮತ್ತು ಡಾ. ರಿತೇಶ್ ಅವರಿಗೆ " ನೆನೆಪಿನ ಕಾಣಿಕೆ " ನೀಡಿ ಸನ್ಮಾನಿಸಲಾಯಿತು.
ಇಕ್ಬಾಲ್ ಪಾಂಡೇಶ್ವರ ಸ್ವಾಗತಿಸಿದರು. ಯಾಹ್ಯ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story