ಅಡ್ಡೂರ್ ಸೆಂಟ್ರಲ್ ಕಮಿಟಿಯ ನಾಲ್ಕನೇ ಮಹಾಸಭೆ; ಅಧ್ಯಕ್ಷರಾಗಿ ಎಂಎಸ್ ರಫೀಕ್ ಆಯ್ಕೆ
ಎಂಎಸ್ ರಫೀಕ್
ದಮಾಮ್ ; ಅಡ್ಡೂರ್ ಸೆಂಟ್ರಲ್ ಕಮಿಟಿಯ ನಾಲ್ಕನೇ ಮಹಾಸಭೆ ದಮಾಮ್ ಅಲ್ ಕಮೀಸ್ ರೆಸಾರ್ಟ್ ನಲ್ಲಿ ರಝಾಕ್ ಮಂಜೊಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಮಾಸ್ಟರ್ ಮೊಹಮ್ಮದ್ ರಿಹಾನ್ ಅಡ್ಡೂರ್ ಕಿರಾಅತ್ ಪಠಿಸುವುದರೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ತೋಕೂರ್ ವಾರ್ಷಿಕ ವರದಿ ಮಂಡಿಸಿದರು. ಕಾರ್ಯದರ್ಶಿ ಖಲಂದರ್ ಗುತ್ತು ಹಣಕಾಸು ವರದಿ ಮಾಡಿದರು.
ಎಂ ಶರೀಫ್ ಅಧ್ಯಕ್ಷೀಯ ಭಾಷಣ ಮಾಡಿ ಕಮಿಟಿಯ ಏಳಿಗೆಗೆ ಶ್ರಮಿಸಿದವರನ್ನು ಸ್ಮರಿಸಿದರು ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಹಳೆ ಕಮಿಟಿಯನ್ನು ವಿಸರ್ಜಿಸಿ ಹೊಸ ಕಮಿಟಿ ರಚನೆಗೆ ಅನುವು ಮಾಡಿ ಕೊಡಲಾಯಿತು.
ಗೌರವ ಅಧ್ಯಕ್ಷರಾಗಿ ಎಂ ಶರೀಫ್ ಅಳಕೆ, ಅಧ್ಯಕ್ಷರಾಗಿ ಎಂಎಸ್ ರಫೀಕ್, ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಝಾಕ್ ಕೆಎಂಟಿ, ರಹೀಮ್ ಟಿ, ಜಮಾಲ್ ಪಾಂಡೇಲ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಟಿ, ಸಹಕಾರ್ಯದರ್ಶಿಯಾಗಿ ರಶೀದ್ ಎಕೆ ಮತ್ತು ಸಿದ್ದಿಕ್ ಎಸ್ ಬಿ, ಕೋಶಾಧಿಕಾರಿಯಾಗಿ ನವಾಝ್ ತೋಕೂರ್, ಲೆಕ್ಕ ಪರಿಶೋಧಕರಾಗಿ ಖಲಂದರ್ ಗುತ್ತು, ಸಲಹೆಗಾರರಾಗಿ ಎ.ಪಿ. ಮೊಹಮ್ಮದ್, ಪಿಸಿ ಶರೀಫ್ ಹಾಗೂ ರಿಝ್ವಾನ್ ತೋಕೂರ್ ಮತ್ತು ಕಾರ್ಯಕಾರಿ ಸಮಿತಿಗೆ ಎಲ್ಲಾ ಘಟಕದ ಇಬ್ಬರು ಸದಸ್ಯರನ್ನು ಒಳಗೊಂಡ 18 ಸದಸ್ಯರನ್ನು ನೇಮಿಸಲಾಯಿತು.
ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ದಮಾಮ್ ಕಮಿಟಿಯ ಸ್ಥಾಪಕ ಅಧ್ಯಕ್ಷರಾದ ಹಸನ್ ತೋಕೂರ್ ಅವರನ್ನು ಸನ್ಮಾನಿಸಲಾಯಿತು. ನವಾಝ್ ತೋಕೂರ್ ಕಾರ್ಯಕ್ರಮ ನಿರೂಪಿಸಿದರು.