ನಂದಿಕೂರಿನಲ್ಲಿ ಎಕ್ಸ್ ಪ್ರೆಸ್ ಬಸ್ಸು ನಿಲುಗಡೆಗೆ ಆದೇಶ
ಪಡುಬಿದ್ರಿ: ಎಲ್ಲೂರು ಫಲಿಮಾರು ಗ್ರಾಮಗಳ ಗಡಿ ಪ್ರದೇಶವಾದ ನಂದಿಕೂರು ಸುತ್ತಮುತ್ತಲಿನ ಜನರ ಬಹು ದಿನಗಳ ಬೇಡಿಕೆ ಯಾದ ನಂದಿಕೂರುವಿನಲ್ಲಿ ಎಕ್ಸ್ ಪ್ರೆಸ್ ಬಸ್ಸುಗಳ ನಿಲುಗಡೆಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅನುಮತಿ ನೀಡಿದೆ.
ಸ್ಥಳೀಯರು ಬಹುಕಾಲದ ಬೇಡಿಕೆಗೆ ಸ್ಪಂಧಿಸಿ ನಂದಿಕೂರಿನಲ್ಲಿ ಎಕ್ಸ್ಪ್ರೆಸ್ ನಿಲುಗಡೆಗೊಳಿಸುವಂತೆ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಕುಮಾರ್ ಸಾರಿಕೆ ಇಲಾಖೆಗೆ ಹಲವು ಭಾರಿ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಮನವಿಗೆ ಸ್ಪಂದಿಸಿ ನ.20ರಂದು ನಂದಿಕೂರಿನಲ್ಲಿ ಕಾರ್ಕಳ-ಪಡುಬಿದ್ರಿ ಮೂಲಕ ಮಂಗಳೂರು ಸಂಚರಿಸುವ ಎಲ್ಲಾ ಎಕ್ಸ್ ಪ್ರೆಸ್ ಬಸ್ಸುಗಳನ್ನು ನಿಲುಗಡೆಗೊಳಿಸಬೇಕು ಎಂದು ಪತ್ರದಲ್ಲಿ ಆದೇಶಸಿದ್ದಾರೆ. ಈ ಬಗ್ಗೆ ನಂದಿಕೂರುವಿನಲ್ಲಿ ಬಸ್ ನಿಲುಗಡೆ ಮಾಡುವಂತೆ ಕೆನರಾ ಬಸ್ ಮಾಲಕರ ಸಂಘ ದ.ಕ ಮತ್ತು ಕರಾವಳಿ ಬಸ್ ಮಾಲಕರ ಸಂಘ ಉಡುಪಿ ಇವರಿಗೆ ಸೂಚಿಸಿ ಪತ್ರ ಬರೆದಿದ್ದಾರೆ. ಎಕ್ಸ್ ಪ್ರೆಸ್ ನಿಲುಗಡೆಗೊಳಿಸುವಂತೆ ನಿರಂತರ ಒತ್ತಡ ಹೇರಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಕುಮಾರ್ ಅವರನ್ನು ಸ್ಥಳೀಯರು ಅಭಿನಂದನೆ ಸಲ್ಲಿಸಿದರು.