ಕಾರ್ಕಳ; ತಾಯಿ ಆತ್ಮಹತ್ಯೆ: ತಂದೆ ಮೇಲೆ ಶಂಕಿಸಿ ದೂರು ನೀಡಿದ ಮಗಳು
ಕಾರ್ಕಳ, ಡಿ.7: ಮೈಮೇಲೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಕುರಿತು ಮಗಳು, ತನ್ನ ತಂದೆ ಹಾಗೂ ಅವರ ಸಂಬಂಧಿಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ ಕುರಿತು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ಮೆಂಟ್ ನಿವಾಸಿ ಸುರೇಂದ್ರ ಕುಡ್ವ(70) ಎಂಬವರ ಪತ್ನಿ ಗೀತಾ(68) ಎಂದು ಗುರುತಿಸಲಾಗಿದೆ.
ಇವರ ತನ್ನ ಪತಿ ಜೊತೆ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದು, ಕೌಂಟುಬಿಕ ಕಾರಣಕ್ಕೆ ಮನನೊಂದು ಗೀತಾ ಡಿ.6ರಂದು ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಡಿ.7ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತ ಪಟ್ಟರು.
ಈ ಕುರಿತು ಮೃತರ ಮಗಳು ಧನಶ್ರೀ ಕುಡ್ವ ದೂರು ನೀಡಿದ್ದು, ತನ್ನ ತಂದೆ ಬೆಂಕಿಯಲ್ಲಿ ಸುಡುತ್ತಿದ್ದ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿರುವುದಾಗಿ ಫ್ಲ್ಯಾಟ್ ನ ಮನೆಯವರು ತಿಳಿಸಿದ್ದರು. ಫ್ಲ್ಯಾಟ್ ವಿಚಾರದ ಬಗ್ಗೆ ತಂದೆ ಹಾಗೂ ಅವರ ತಮ್ಮಂದಿರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರಿಂದ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಈ ರೀತಿ ಮಾಡಿ ಕೊಳ್ಳುವ ಹಾಗೆ ತಂದೆ ಹಾಗೂ ಮನೆಯವರು ಪ್ರೇರೆಪಿಸಿದ್ದಾರೆ. ಆದ್ದರಿಂದ ನನ್ನ ತಂದೆ ಸುರೇಂದ್ರ ಕುಡ್ವ ಮತ್ತು ಅವರ ತಮ್ಮಂದಿರಾದ ನಿತ್ಯಾನಂದ ಕುಡ್ವ, ವಿಜೇಂದ್ರ ಕುಡ್ವ, ಮುಕುಂದ ಕುಡ್ವ, ತಂಗಿ ಪುಷ್ಪಲತಾ ಮೇಲೆ ಅನುಮಾನ ಇರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.