ಗದ್ದೆ ಅಂಚಿನಲ್ಲಿ ಆಯತಪ್ಪಿ ಬಿದ್ದು ಮೃತ್ಯು
ಬ್ರಹ್ಮಾವರ, ಜ.11: ಗದ್ದೆ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಯೊಬ್ಬರು ಆಯ ತಪ್ಪಿಬಿದ್ದು ಮೃತಪಟ್ಟ ಘಟನೆ ಜ.10ರಂದು ರಾತ್ರಿ ವೇಳೆ 33ನೇ ಶೀರೂರು ಗ್ರಾಮದ ಮರ್ಲಾಡಿ ಎಂಬಲ್ಲಿ ನಡೆದಿದೆ.
ಮೃತರನ್ನು 33ನೇ ಶೀರೂರು ಗ್ರಾಮದ ಮರ್ಲಾಡಿ ನಿವಾಸಿ ಅಶೋಕ ಶೆಟ್ಟಿ, (57) ಎಂದು ಗುರುತಿಸಲಾಗಿದೆ. ಇವರು ಬಾರ್ಕೂರಿನ ಅಯ್ಯಪ್ಪಸ್ವಾಮಿ ಚಪ್ಪರಕ್ಕೆ ಮಾಲೆ ಹಾಕಿರುವ ತನ್ನ ಮಗನನ್ನು ಇರುಮುಡಿ ಕಟ್ಟಿ ಸ್ವಾಮಿ ಕ್ಷೇತ್ರಕ್ಕೆ ಕಳುಹಿಸಿಕೊಡಲು ಮನೆಗೆ ಗದ್ದೆ ಅಂಚಿನಲ್ಲಿ ಗಡಿಬಿಡಿಯಲ್ಲಿ ನಡೆದುಕೊಂಡು ಹೋಗುವಾಗ ಆಯ ತಪ್ಪಿಮುಖ ಅಡಿಯಾಗಿ ಬಿದ್ದರೆನ್ನಲಾಗಿದೆ. ಇದರಿಂದ ತಲೆಗೆ ಪೆಟ್ಟಾಗಿ ಅಥವಾ ಉಸಿರುಗಟ್ಟಿ ಅಥವಾ ಹೃದಯಾಘಾತದಿಂದ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story