ಎಲ್ಲ ಮಠಾಧೀಶರ ಸಹಕಾರದಿಂದ ಪರ್ಯಾಯ ಯಶಸ್ಸು: ಅದಮಾರು ಶ್ರೀ
ಉಡುಪಿ, ಜ.17: ಎಲ್ಲ ಮಠಾಧೀರ ಸಹಕಾರದಿಂದ ನಮ್ಮ ಅವಧಿಯ ಪರ್ಯಾಯ ಒಳ್ಳೆಯ ರೀತಿಯಲ್ಲಿ ಮುಗಿದಿದೆ. ಇದರಲ್ಲಿ ಜನತೆಯ ಶ್ರಮ ಕೂಡ ಸಾಕಷ್ಟು ಇದೆ. ಮರಿ ಆನೆಯನ್ನು ಆನೆಗಳ ಹಿಂಡು ರಕ್ಷಿಸುವಂತೆ ಎಲ್ಲ ಮಠಾಧೀಶರು ನಮ್ಮನ್ನು ಆ ರೀತಿಯಲ್ಲಿ ನಡೆಸಿಕೊಂಡು ಹೋಗಿದ್ದಾರೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ವತಿಯಿಂದ ಸೋಮವಾರ ಸಂಜೆ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ನಾಗರಿಕ ಅಭಿನಂದನೆ ಸ್ವಿೀಕರಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಭಾವೀ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾ ಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಕೊರೋನಾ ಭಾದೆಯ ಮಧ್ಯೆಯೂ ಅದಮಾರು ಸ್ವಾಮೀಜಿ ಕೃಷ್ಣನ ಪೂಜೆಗೆ ಚ್ಯುತಿ ಬಾರದೆ ನಡೆಸಿಕೊಂಡು ಹೋಗಿ ದ್ದಾರೆ. ಕೊರೋನ ಲಾಕ್ಡೌನ್ ನಿಂದ ಮಠಕ್ಕೆ ಆದಾಯದ ಇಲ್ಲದಿದ್ದರೂ ಉತ್ತಮವಾಗಿ ನಡೆಸಿಕೊಂಡು ಹೋಗಿರುವುದು ದೊಡ್ಡ ಸಂಗತಿಯಾಗಿದೆ. ಆಪತ್ತಿನಲ್ಲೂ ಯಾವ ರೀತಿ ಮಠ ನಡೆಸಬಹುದು ಎಂಬುದನ್ನು ಇವ ರು ತೋರಿಸಿ ಕೊಟ್ಟಿದ್ದಾರೆ ಎಂದರು.
ವಿದ್ವಾಂಸ ಕೃಷ್ಣರಾಜ ಕುತ್ಪಾಡಿ ಅಭಿವಂದನಾ ಭಾಷಣ ಮಾಡಿದರು. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ, ಶಾಸಕ ರಘುಪತಿ ಭಟ್ ಸ್ವಾಗತಿಸಿದರು.