ಕೆಸಿಎಫ್ ಬಹರೈನ್ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಬಹರೈನ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಬಹರೈನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಬಹರೈನ್ ದಿ ಎಂ ಸೂಟ್ ಹಾಲ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ವಿಟ್ಟಲ್ ಜಮಾಲುದ್ದೀನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಅಲಿ ಮುಸ್ಲಿಯಾರ್ ರವರು ಉದ್ಘಾಟಿಸಿದರು.
ಐ ಎನ್ ಸಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಅಲಿ ಮುಸ್ಲಿಯರ್ ದುಆ ದೊಂದಿಗೆ ಆರಂಭಗೊಂಡಿತು. ದರ್ವೇಶ್ ಮುಹಮ್ಮದ್ ಅಲಿ ಖಿರಾಅತ್ ಪಾರಾಯಣ ಮಾಡಿದರು. ಹಾರಿಸ್ ಸಂಪ್ಯ ಸ್ವಾಗತಿಸಿದರು.
2019-2022 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಸೂಫೀ ಪೈಂಬಚ್ಚಾಲ್ ರವರು ಮಂಡಿಸಿದರು. ಅಧ್ಯಕ್ಷೀಯ ಭಾಷಣದಲ್ಲಿ ಕೆ ಸಿ ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ರವರು ಕೆ.ಸಿ.ಎಫ್ ಕಳೆದ ಎಂಟು ವರ್ಷಗಳ ಕಾಲ ಮಾಡಿರುವ ಸಾಧನೆಗಳನ್ನು ವಿವರಿಸುತ್ತಾ , ಕೆಸಿಎಫ್ ಬಹರೈನಿನ ಉನ್ನತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
ನಂತರ 2019-21ನೇ ಸಾಲಿನ ಸಮಿತಿಯನ್ನು ಬರ್ಕಾಸ್ತುಗೊಳಿಸಿ, 2022 -24 ನೇ ಸಾಲಿನ ಹೊಸ ಸಮಿತಿಯ ಪಧಾಧಿಕಾರಿಗಳನ್ನು ಐ ಎನ್ ಸಿ ನೇಮಿಸಿದ ರಿಟರ್ನಿಂಗ್ ಆಫೀಸರ್ ಹಾಜಿ ಅಬೂಬಕ್ಕರ್ ರೈಸ್ಕೊ ರವರ ಉಸ್ತುವಾರಿಯಲ್ಲಿ ನೂತನ ಸಮಿತಿಯನ್ನು ಪುನರ್ರಚಿಸಲಾಯಿತು.
ನೂತನ ಸಮಿತಿಯ ಪದಾಧಿಕಾರಿಗಳು
ಅಧ್ಯಕ್ಷರು: ಜಮಾಲುದ್ದೀನ್ ವಿಟ್ಲ
ಪ್ರ.ಕಾರ್ಯದರ್ಶಿ: ಹಾರಿಸ್ ಸಂಪ್ಯ
ಕೋಶಾಧಿಕಾರಿ: ಸೂಫಿ ಪೈಂಬಚ್ಚಾಲ್
ಸಂಘಟನಾ ಇಲಾಖೆ
ಅಧ್ಯಕ್ಷರು: ಕಲಂದರ್ ಮುಸ್ಲಿಯಾರ್ ಕಕ್ಕೆಪದವು
ಕಾರ್ಯದರ್ಶಿ: ಮನ್ಸೂರ್ ಬೆಳ್ಮ
ಶಿಕ್ಷಣ ಇಲಾಖೆ
ಅಧ್ಯಕ್ಷರು: ಸಿದ್ದೀಕ್ ಉಸ್ತಾದ್
ಕಾರ್ಯದರ್ಶಿ: ಅಶ್ರಫ್ ರೆಂಜಾಡಿ
ಸಾಂತ್ವನ ಇಲಾಖೆ
ಅಧ್ಯಕ್ಷರು: ಹನೀಫ್ ಗುರುವಾಯನಕೆರೆ
ಕಾರ್ಯದರ್ಶಿ: ಅನ್ಸಾರ್ ಬಜ್ಪೆ
ಆಡಳಿತ ಇಲಾಖೆ
ಅಧ್ಯಕ್ಷರು: ಸವಾದ್ ಉಳ್ಳಾಲ್
ಕಾರ್ಯದರ್ಶಿ: ತೌಫೀಕ್ ಬೆಳ್ತಂಗಡಿ
ಇಹ್ಸಾನ್ ಇಲಾಖೆ
ಅಧ್ಯಕ್ಷರು: ಶಾಫಿ ಮಾದಾಪುರ
ಕಾರ್ಯದರ್ಶಿ: ಸಮದ್ ಉಜಿರೆಬೆಟ್ಟು
ಪಬ್ಲಿಕೇಷನ್ ವಿಭಾಗ
ಅಧ್ಯಕ್ಷರು: ಲತೀಫ್ ಪೆರೋಲಿ
ಕಾರ್ಯದರ್ಶಿ: ಹನೀಫ್ ಕೀನ್ಯಾ
22 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯ್ತು.
ಐ ಎನ್ ಸಿ ಬಹರೈನ್ ಕೌನ್ಸಿಲರ್ ಗಳಾಗಿ ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಟ್ಲ, ಫಾರೂಕ್ ಎಸ್.ಎಂ,ಬಶೀರ್ ಕಾರ್ಲೆ, ಹಾರಿಸ್ ಸಂಪ್ಯ, ಸೂಫಿ ಪಯಂಬಚಾಲ್, ಕಲಂದರ್ ಮುಸ್ಲಿಯಾರ್ ಕಕ್ಕೆಪದವು ರವರನ್ನು ನೇಮಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅಲ್ ಖಾದಿಸಾ ಚೇರ್ಮಾನ್ ಹಝ್ರತ್ ಮುಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆಯವರು ಕಾರ್ಯ ಕರ್ತರಿಗೆ ಹಿತೋಪದೇಶವನ್ನು ನೀಡಿದರು. ಐ.ಎನ್.ಸಿ ಕೌನ್ಸಿಲರ್ ಬಶೀರ್ ಕಾರ್ಲೆ ನೂತನ ಸಮಿತಿಗೆ ಶುಭವನ್ನು ಕೋರಿದರು.
ಸಂಘಟನಾ ವಿಭಾಗದ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ಕಾರ್ಯಕ್ರಮವನ್ನು ನಿರೂಪಿಸಿ, ಪಬ್ಲಿಕೇಶನ್ ಚೇರ್ಮನ್ ಲತೀಫ್ ಪೆರೋಲಿ ಧನ್ಯವಾದಗೈದರು.