ಬ್ಯಾಂಕ್ ಮುಷ್ಕರ: ಮತ ಪ್ರದರ್ಶನ
ಉಡುಪಿ, ಜು.29: ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೀಡಿರುವ ಕರೆಯಂತೆ ಉಡುಪಿ ಜಿಲ್ಲೆಯ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಮುಷ್ಕರ ನಡೆಸಿದರು.
ಈ ಪ್ರಯುಕ್ತ ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಎದುರು ಯೂನಿಯನ್ಸ್ ಉಡುಪಿ ಘಟಕದ ನೇತೃತ್ವದಲ್ಲಿ ಮತ ಪ್ರದರ್ಶನ ನಡೆಸಲಾಯಿತು. ಸಾರ್ವಜನಿಕರ ರಂಗದ ಬ್ಯಾಂಕ್ಗಳನ್ನು ವಿಲೀನಗೊಳಿಸುವುದನ್ನು ಸ್ಥಗಿತಗೊಳಿಸಬೇಕು. ಬ್ಯಾಂಕ್ಗಳ ಖಾಸಗೀಕರಣ ಕೈಬಿಡಬೇಕು. ನೌಕರರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರವನ್ನು ಕೈಬಿಡಬೇಕು ಎಂದು ಮುಷ್ಕರ ನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಪದಾಧಿಕಾರಿಗಳಾದ ರಾಮಮೋಹನ್, ಜಯಪ್ರಕಾಶ್ ರಾವ್, ಮಾಧವ ಭಟ್, ಕೆ.ಆರ್.ಶೆಣೈ, ಬಿ.ಎಂ.ಮಾಧವ, ಬಾಲಗಂಗಾಧರ್, ಹೆರಾಲ್ಡ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
Next Story