ಪಡುಬಿದ್ರೆ: ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕರಿಗೆ ನಾಗರಿಕ ಸನ್ಮಾನ
ಪಡುಬಿದ್ರೆ, ಮೇ 30: ಸಂತೃಪ್ತ ಗ್ರಾಹಕರೇ ಯಾವುದೇ ವಿತ್ತೀಯ ಸಂಸ್ಥೆಗಳ, ಬ್ಯಾಂಕುಗಳ ಅಭಿವೃದ್ಧಿಗೆ ಕಾರಣರಾಗುತ್ತಾರೆ. ಸಂತೃಪ್ತ ಒಬ್ಬ ಗ್ರಾಹಕನೇ ಬ್ಯಾಂಕಿನತ್ತ ಇನ್ನೂ ಹತ್ತು ಮಂದಿ ಗ್ರಾಹಕರನ್ನು ಆಕರ್ಷಿಸಬಲ್ಲ ಎಂಬ ವಿಶ್ವಾಸ ತನ್ನದು ಎಂದು ಕೆನರಾ ಬ್ಯಾಂಕ್ನ ಹಿರಿಯ ಪ್ರಬಂಧಕ ಸುಧೇಶ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಅವರು ಪಡುಬಿದ್ರೆಯ ಕೆನರಾ ಬ್ಯಾಂಕ್ನಿಂದ ಮಂಗಳೂರು ದೇರಳಕಟ್ಟೆ ಶಾಖೆಗೆ ಹಿರಿಯ ಪ್ರಬಂಧಕರಾಗಿ ವರ್ಗಾವಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಪಡುಬಿದ್ರೆಯ ಸಹಕಾರಿ ವ್ಯವಸಾಯಿಕ ಸಂಘದ ಸಭಾಂಗಣದಲ್ಲಿ ನಾಗರಿಕರ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳ್ ಆಧ್ಯಕ್ಷತೆ ವಹಿಸಿದ್ದರು. ಮಾಜಿ ತಾಪಂ ಸದಸ್ಯ ನವೀನ್ಚಂದ್ರ ಜೆ. ಶೆಟ್ಟಿ, ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಹಿರಿಯ ನಾಗರಿಕ, ಉದ್ಯಮಿ ವೈ. ಉದಯ ಶೆಟ್ಟಿ ಎರ್ಮಾಳ್, ಪಡುಬಿದ್ರೆ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಗುರುರಾಜ ಪೂಜಾರಿ, ಪಡುಬಿದ್ರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಶೋದಾ ಮತ್ತಿತರರು ಉಪಸ್ಥಿತರಿದ್ದರು.
ಅಂಚನ್ ಆಯುರ್ವೇದಿಕ್ನ ಆಡಳಿತ ನಿರ್ದೇಶಕ ಡಾ.ಎನ್.ಟಿ.ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯ ಶೆಟ್ಟಿ ಪದ್ರ ಕಾರ್ಯಕ್ರಮ ನಿರೂಪಿಸಿದರು. ವೈ.ಸುಕುಮಾರ್ ವಂದಿಸಿದರು.