ಮುಲ್ಕಿ- ಮೂಡುಬಿದಿರೆ ಕಾಂಗ್ರೆಸ್ ನಿಂದ ಆ.28ರಂದು ಬೈಕ್ ಜಾಥಾ: ಮಿಥುನ್ ರೈ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ
ಮುಲ್ಕಿ, ಆ.24: ದೇಶದ ಸ್ವಾತಂತ್ರ್ಯ ದಿನಾಚರಣೆಯ ಅಮೃತೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಆಗಸ್ಟ್ ತಿಂಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂಗವಾಗಿ ಆ.28ರಂದು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾರ್ಗದರ್ಶನದಲ್ಲಿ ಬೃಹತ್ ಬೈಕ್ ಜಾಥಾ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.
ಹಳೆಯಂಗಡಿಯಲ್ಲಿ ನಡೆದ ಸಂಘಟನಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯ ಅಲಂಕಾರ ದೇವಸ್ಥಾನದಿಂದ ಹೊರಡುವ ಈ ಜಾಥಾ ಮುಲ್ಕಿ ಬಪ್ಪನಾಡು ಕ್ಷೇತ್ರದಲ್ಲಿ ಸಮಾಪನಗೊಳ್ಳಲಿದೆ. ಪ್ರತೀ ಬೈಕ್ ನಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದ್ದು, ಗಳಿಸಿದ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಸಂದೇಶವನ್ನು ಈ ಜಾಥಾದ ಮೂಲಕ ಸಮಾಜಕ್ಕೆ ನೀಡಲಾಗುವುದು ಎಂದು ನುಡಿದರು.
ಸಭೆಯಲ್ಲಿ ಜಾಥಾದ ಸಂಘಟನಾ ಸಮಿತಿಯ ಮೋಹನ್ ಕೋಟ್ಯಾನ್, ಎಚ್. ವಸಂತ ಬರ್ನಾಡ್, ಪುತ್ತುಬಾವಾ ಮುಲ್ಕಿ, ಬಾಬು ಶೆಟ್ಟಿ ಮಳವೂರು, ಹಸನಬ್ಬ ಬಾಳ, ವೇಣು ವಿನೋದ್ ಶೆಟ್ಟಿ ಚೇಳಾಯರು, ಬಿ.ಜೆ.ರಹೀಂ ಬಜ್ಪೆ, ಅಶೋಕ್ ಪೂಜಾರ್, ಮಂಜುನಾಥ ಕಂಬಾರ, ಪದ್ಮಾವತಿ ಶೆಟ್ಟಿ, ಶಾಹುಲ್ ಹಮೀದ್ ಬಜ್ಪೆ, ಯೋಗೀಶ್ ಕೋಟ್ಯಾನ್ ಚಿತ್ರಾಪು, ಜನಾರ್ದನ ಬಂಗೇರ, ಲೀಲಾ ಕೃಷ್ಣಪ್ಪ, ಬಾಲಚಂದ್ರ ಕಾಮತ್, ಸುರೇಶ್ ಪಂಜ, ಹರಿಯಪ್ಪ ಚೇಳಾಯರು, ಸುನೀಲ್ , ಸುರೇಂದ್ರ ಪೆರ್ಗಡೆ, ಟಿ.ಎಚ್. ಮಯ್ಯದ್ದಿ, ಪುಷ್ಪರಾಜ್ ಅಂಚನ್, ಸೃಜನ್ ಅಂಚನ್, ಸರ್ಫ್ರಾಝ್ ಬಾಳ, ಬಶೀರ್ ಜೋಕಟ್ಟೆ, ಅಬ್ದುರ್ರಝಾಕ್ ಸೂರಿಂಜೆ, ಮಯ್ಯದಿ ಪಕ್ಷಿಕೆರೆ ಮೊದಲಾದವರಿದ್ದರು.