ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ನೂತನ ಸಮಿತಿ ಅಸ್ತಿತ್ವಕ್ಕೆ
ಮಂಗಳೂರು: ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಮಂಗಳೂರು ರೇಂಜ್ ಇದರ 2022-2025 ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ಮಂಗಳೂರು ಬಂದರ್ ಸಮಸ್ತ ಕಚೇರಿಯಲ್ಲಿ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಹಾಜಿ ರಿಯಾಝುದ್ದೀನ್ ಬಂದರ್, ಉಪಾಧ್ಯಕ್ಷರಾಗಿ ಟಿ ಮೊಹಮ್ಮದ್, ಹುಸ್ಯೆನ್ ಬೋಳಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಸನ್ ಬೆಂಗರೆ, ಜೊತೆ ಕಾರ್ಯದರ್ಶಿಗಳಾಗಿ ಎಂ ಕೆ ಲತೀಫ್ ಮಲ್ಲೂರ್, ಅಬ್ದುಲ್ ಸಮದ್ ತೋಟ ಬೆಂಗರೆ, ಕೋಶಾಧಿಕಾರಿಯಾಗಿ ಎ.ಎಂ. ಶೈಖ್ ಹ್ಯೆದರ್, ವರ್ಕಿಂಗ್ ಕಾರ್ಯದರ್ಶಿ ಇಸ್ಮಾಯಿಲ್ ಅಹ್ಮದ್ ಬಿಜ್ಯೆ, ಮೀಡಿಯಾ ಕಾರ್ಯದರ್ಶಿ ಮೊಹಮ್ಮದ್ ಶಫೀಕ್ ಮಲ್ಲೂರು ರವರು ಆಯ್ಕೆಯಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೌನ್ಸಿಲರ್ ಆಗಿ ಹಾಜಿ ರಿಯಾಝ್ ಅಹ್ಮದ್ (ರಾಣಿ ಬೀಡಿ), ಹಾಗೂ ಎನ್ ಕೆ ಅಬೂಬಕ್ಕರ್ ಕುದ್ರೋಳಿ, ಹಾಗೂ ಮಂಗಳೂರು ರೇಂಜಿಗೆ ಒಳಪಟ್ಟ ಎಲ್ಲಾ ಜಮಾತ್ ಕಮಿಟಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಹಾಗೂ ಕೋಶಾಧಿಕಾರಿಯವರು ನಮ್ಮ ಸಮಿತಿಯ ಖಾಯಂ ಸದಸ್ಯರಾಗಿರುತ್ತಾರೆ,
ಚುನಾವಣಾ ಅಧಿಕಾರಿಯಾಗಿ ರೆಹ್ಮಾನ್ ಅಬ್ದುಲ್ ಖಾದರ್ ಉಡುಪಿ ವಹಿಸಿದರು, ಮುಖ್ಯ ಅತಿಥಿಗಳಾಗಿ ಎಂಎ ಅಬೂಬಕರ್ ಮಳಲಿ, ಹಾಜಿ ರಫೀಕ್ ಕೂಡಜೆ, ಎಂ ಎಸ್ ಅಬ್ದುಲ್ ಹಲೀಮ್ ಅರ್ಷದಿ, ಹಾಜಿ ಐ ಮೋಯ್ದಿನಬ್ಬ ಹಾಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು