ಸಿವಿಲ್ ನ್ಯಾಯಾಧೀಶರ ಪರೀಕ್ಷೆ: ಉಡುಪಿಯ ವರ್ಷಶ್ರೀ ತೇರ್ಗಡೆ
ಉಡುಪಿ, ಡಿ.15: ರಾಜ್ಯ ಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉಡುಪಿ ಕರಂಬಳ್ಳಿಯ ವರ್ಷಶ್ರೀ ತೇರ್ಗಡೆಯಾಗಿದ್ದಾರೆ.
ನಿವೃತ್ತ ಶಿಕ್ಷಕ ದಿವಾಕರ್ ಐತಾಳ್ ಮತ್ತು ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಅವರ ಪುತ್ರಿ ವರ್ಷಶ್ರೀ, ಗುಂಡಿಬೈಲ್ ಶಾಲೆ, ನಿಟ್ಟೂರು ಫ್ರೌಡ ಶಾಲೆ, ಉಡುಪಿ ಹೆಮ್ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು 2012ರಲ್ಲಿ ಪಡೆದಿದ್ದರು. ಪ್ರಸ್ತುತ ಇವರು ಸರಕಾರಿ ಸಹಾಯಕ ಅಭಿಯತಂರರಾಗಿ ಕುಂದಾಪುರದ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Next Story