ಪೂಜಾರಿಯವರ ಆತ್ಮಕತೆಯಲ್ಲಿ ಏನಿರುತ್ತದೆ?
ಮಂಗಳೂರು, ಸೆ.12: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಆತ್ಮಕತೆ ಬರೆಯುತ್ತಿದ್ದಾರೆಯೇ? ಹೌದು, ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನನ್ನ ಆತ್ಮಕತೆಯನ್ನು ಬರೆಯಲು ಆರಂಭಿಸಿದ್ದೇನೆ. ಆದರೆ ಯಾವಾಗ ಪೂರ್ಣಗೊಳ್ಳಲಿದೆ ಎಂದು ಹೇಳಲಾರೆ ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯ ಸಂದರ್ಭ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ, ಆತ್ಮಕತೆ ಬರೆಯುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
‘‘ನಾನು ನನ್ನ ಆತ್ಮತೆಯನ್ನು ಬರೆಯಲು ಆರಂಭಿಸಿದ್ದೇನೆ. ಪ್ರತಿನಿತ್ಯ ರಾತ್ರಿ ವೇಳೆ ಕೆಲವು ಪುಟಗಳಷ್ಟು ಬರೆಯುತ್ತಿದ್ದೇನೆ. ಈಗಾಗಲೇ 120 ಪುಟಗಳಷ್ಟು ಬರೆದಿದ್ದೇನೆ. ಆತ್ಮಕತೆ ಎಂದರೆ ಅದರಲ್ಲಿ ಸತ್ಯ ವಿಚಾರಗಳೇ ಇರಬೇಕು. ನಾನು ನನ್ನ ಆತ್ಮಕತೆಯಲ್ಲಿ ಸತ್ಯವನ್ನೇ ಬರೆದಿದ್ದೇನೆ. ಯಾವ ಸುಳ್ಳನ್ನೂ ಬರೆದಿಲ್ಲ. ಯಾರಿಗೋ ಬೇಜಾರಾಗುತ್ತದೆ, ನೋವಾಗುತ್ತದೆ ಎಂಬ ದಾಕ್ಷಿಣ್ಯಕ್ಕೆ ಸುಳ್ಳು ಬರೆದಿಲ್ಲ.’’ ಎಂದು ಪೂಜಾರಿ ಹೇಳಿದರು.
Next Story