ಸಜೀಪ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ನ ಮಹಾಸಭೆ
ಕೊಣಾಜೆ, ಸೆ.19: ಸಜೀಪ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ನ ಮಹಾಸಭೆಯು ಇತ್ತೀಚಿಗೆ ಅಲ್ಮದ್ರಸತ್ತುನ್ನೂರಿಯ್ಯಾದಲ್ಲಿ ಸಮಸ್ತ ವಿದ್ಯಾಬ್ಯಾಸ ಬೋರ್ಡ್ ಮದ್ರಸ ತಪಾಸಣಾಧಿಕಾರಿ ಉಮರುಲ್ ಫಾರೂಖ್ ದಾರಿಮಿ ತೆಕ್ಕಾರು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ನ ಅಧ್ಯಕ್ಷ ಕೆ.ಬಿ.ಅಬ್ದುಲ್ ಖಾದರ್ ದಾರಿಮಿ ಉಧ್ಘಾಟಿಸಿದರು. ಸ್ಥಳೀಯ ಖತೀಬ್ ಅಶ್ಫಖ್ ಫೈಝಿ ದುಆ ನೆರವೇರಿಸಿದರು. ನೂತನ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಎಸ್.ಅಬ್ದುರ್ರಝಾಕ್ ಹಾಜಿ, ಅಧ್ಯಕ್ಷರಾಗಿ ಎನ್.ಎಸ್. ಅಬ್ಬಾಸ್ ಹಾಜಿ ಸಜೀಪ, ಪ್ರಧಾನ ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ನಂದಾವರ, ಕೋಶಾಧಿಕಾರಿಯಾಗಿ ಸಿದ್ದೀಖ್ ಕೋಟೆಕಣಿಯವರನ್ನು ಆಯ್ಕೆ ಮಾಡಲಾಯಿತು.
ಅಬ್ದುರ್ರಝಾಕ್ ಕಾರಾಜೆ, ಹೈದರ್ ಹಾಜಿ ತಲೆಮೊಗೆರು ಉಪಾಧ್ಯಕ್ಷರಾಗಿಯೂ ಇಬ್ರಾಹೀಂ ರಂತಡ್ಕ, ಮೋನು ಬೋಳಾಮೆ ಜೊತೆ ಕಾರ್ಯದರ್ಶಿಗಳಾಗಿಯೂ ಕರೀಂ ಮಲಾಯಿಬೆಟ್ಟು ಸಂಘಟನಾ ಕಾರ್ಯದರ್ಶಿಯಾಗಿಯೂ ಆರಿಸಲಾಯಿತು. ಸಲಹಾ ಸಮಿತಿಗೆ ಮುಹಮ್ಮದ್ ಗುಡ್ಡೆ ಅಂಗಡಿ, ಅಬ್ದುರ್ರಹ್ಮಾನ್ ಹಾಜಿ ಆಲಾಡಿ, ಹಸೈನಾರ್ ಪದವು, ಎಸ್.ಮುಹಮ್ಮದ್, ಅಬ್ದುರ್ರಝಾಕ್ ಬೈಲಗುತ್ತು, ಅಬ್ದುಲ್ ಖಾದರ್ ಕುಂಟಾಲು ಗುಡ್ಡೆ ಆಯ್ಕೆಯಾದರು. ಸಿದ್ದೀಖ್ ವರಕ್ಕಲ್ ಸ್ವಾಗತಿಸಿ, ವಂದಿಸಿದರು.
ವರದಿ: ಎನ್.ಎಸ್. ಅಬ್ಬಾಸ್ ಹಾಜಿ ಸಜೀಪ
ಅಧ್ಯಕ್ಷರು, ಸಜೀಪ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೊಸಿಯೇಶನ್