ಮದ್ಯ, ಮಾದಕವಸ್ತು ವಿರುದ್ಧ ಸಮಾಜ ಒಗ್ಗೂಡಲಿ: ಸಚಿವ ಚಂದ್ರಶೇಖರನ್
ಕಾಸರಗೋಡು: ಗಾಂಧಿ ಜಯಂತಿ ವಾರಾಚರಣೆ ಕಾರ್ಯಕ್ರಮ
ಕಾಸರಗೋಡು, ಅ.2: ಪ್ರಸ್ತುತ ಮದ್ಯ, ಮಾದಕವಸ್ತು ಮಾಫಿಯಾ ವಿರುದ್ಧ ಸಮಾಜ ಒಗ್ಗೂಡಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
ಗಾಂಧಿ ಜಯಂತಿ ವಾರಾಚರಣೆಯ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ, ಅಬಕಾರಿ ಇಲಾಖೆಯ ಸಹಯೋಗದಲ್ಲಿ ಕಾಞಂಗಾಡ್ನಲ್ಲಿ ರವಿವಾರ ಆಯೋಜಿ ಸಿದ್ದ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಮಾದಕವಸ್ತುಗಳು, ಮದ್ಯ ಮಾಫಿಯಾ ಹೊಸ ತಲೆಮಾರಿಗೆ ಕಂಟಕವಾಗಿ ಪರಿಣಮಿಸಿದೆ. ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳ ಬೇಕಿದೆ ಎಂದು ಅವರು ಹೇಳಿದರು.
ಕಾಞಂಗಾಡ್ ನಗರಸಭಾ ಅಧ್ಯಕ್ಷ ವಿ.ವಿ.ರಮೇಶನ್, ಕಾಸರಗೋಡು ಅಬಕಾರಿ ಸಹಾಯಕ ಆಯುಕ್ತ ಮ್ಯಾಥ್ಯೂ ಕುರಿಯನ್, ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮ ಇಬ್ರಾಹೀಂ, ಎನ್.ಝುಲೈಕಾ, ವಿ.ಪಿ.ಜಾನಕಿ, ಜಿಲ್ಲಾ ವಾರ್ತಾಧಿಕಾರಿ ಇ.ವಿ.ಸುಗತನ್, ಸಿ.ಕೆ.ಸುನೀಲ್ಕುಮಾರ್, ಎನ್.ಗಂಗಾಧರನ್, ಎನ್.ಜಿ.ರಘುನಾಥನ್ ಮೊದ ಲಾದವರು ಉಪಸ್ಥಿತರಿದ್ದರು.