ಹೊಳೆಗೆ ಬಿದ್ದು ಬಾಲಕ ಮೃತ್ಯು
ಕೋಟ, ಅ.30: ಬಯಲಿನಲ್ಲಿ ಮೇಯಲು ಕಟ್ಟಿದ ಹಸುಗಳನ್ನು ಮನೆಗೆ ತರಲು ಹೋದ ಬಾಲಕನೊರ್ವ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಅ.29 ರಂದು ಬೇಳೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಬೇಳೂರು ಗ್ರಾಮದ ಮೂಡುಬೆಟ್ಟು ನಿವಾಸಿ ಜಯರಾಮ ಕೊಠಾರಿ ಎಂಬವರ ಮಗ ಶ್ರೇಯಸ್(14) ಎಂದು ಗುರುತಿಸಲಾಗಿದೆ.
ಈತ ಮಧ್ಯಾಹ್ನ ಬಯಲಿನಲ್ಲಿ ಮೇಯಲು ಕಟ್ಟಿದ ಹಸುಗಳನ್ನು ಮನೆಗೆ ತರಲು ಹೋದವನು ನಾಪತ್ತೆಯಾಗಿದ್ದನು. ಬಳಿಕ ಅಲ್ಲೇ ಸಮೀಪದ ಹಿರೇ ಹೊಳೆ ಯಲ್ಲಿ ಕುಂದಾಪುರ ಅಗ್ನಿಶಾಮಕ ದಳದವರು ಹುಡುಕಾಡಿದ ಅಪರಾಹ್ನ 3:45ರ ಸುಮಾರಿಗೆ ಮೃತದೇಹ ಪತ್ತೆಯಾಯಿತು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story