ಎಸ್ಡಿಪಿಐ ವಿರುದ್ಧದ ಆರೋಪಕ್ಕೆ ಖಂಡನೆ
ಉಡುಪಿ, ಅ.30: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಎಸ್ಡಿಪಿಐ ವಿರುದ್ಧ ಕೆಲ ಮಾಧ್ಯಮಗಳು ವಿನಾಕಾರಣ ನಡೆಸುತ್ತಿರುವ ಆರೋಪಗಳು ದುರಾದೃಷ್ಟಕರ. ಇನ್ನೂ ಈ ಹತ್ಯೆಯ ತನಿಖೆಯ ಹಂತದಲ್ಲಿ ಇದ್ದರೂ ಕೆಲ ಮಾಧ್ಯಮಗಳು ನ್ಯಾಯಾಧೀಶರಂತೆ ತೀರ್ಪು ನೀಡಿರುವುದು ಖಂಡನೀಯ ಎಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ತಿಳಿಸಿದ್ದಾರೆ.
ಎಸ್ಡಿಪಿಐ ಮತ್ತು ರುದ್ರೇಶ್ ಹತ್ಯೆಗೆ ಯಾವುದೇ ಸಂಬಂಧವಿಲ್ಲ. ಇವೆಲ್ಲವೂ ಕೂಡಾ ಜನಪರ ಹೋರಾಟ ಮಾಡುತ್ತ ರಾಜಕೀಯ ಮುಂಚೂಣಿಯಲ್ಲಿ ಬೆಳೆದು ಬರುತ್ತಿರುವ ಪಕ್ಷವನ್ನು ಮುಗಿಸಲು ನಡೆಸುತ್ತಿರುವ ಒಂದು ರಾಜಕೀಯ ಷಡ್ಯಂತ್ರದ ಭಾಗ ಮಾತ್ರ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
Next Story