ರಿಯಾದ್ನಲ್ಲಿ ಮೃತಪಟ್ಟ ಅಝೀಝ್ ಕುಟುಂಬಕ್ಕೆ ಕೆಸಿಎಫ್ ಕಾರ್ಯಕರ್ತರಿಂದ ಸಾಂತ್ವನ
ರಿಯಾದ್, ಅ.30: ಇತ್ತೀಚೆಗೆ ರಿಯಾದ್ನಲ್ಲಿ ಮರಣ ಹೊಂದಿದ ಅಬ್ದುಲ್ ಅಝೀಝ್ ಮಾರ್ನಾಡ್ರ ಮನೆಗೆ ತೆರಳಿದ ಕೆಸಿಎಫ್ ಕಾರ್ಯಕರ್ತರು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸೌದಿ ಅರೇಬಿಯದಲ್ಲಿ ಅಬ್ದುಲ್ ಅಝೀಝ್ರ ಮೃತದೇಹದ ಅಂತ್ಯಕ್ರಿಯೆಗೆ ಬೇಕಾಗಿದ್ದ ದಾಖಲೆಗಳನ್ನು ತಲುಪಿಸಲು ಸಹಕರಿಸಿದ ಅಬ್ದುಸ್ಸಲಾಂ ಮದನಿ ಮಾರ್ನಾಡ್ರನ್ನು ಕೆಸಿಎಫ್ ಮುಖಂಡರು ಅಭಿನಂದಿಸಿದರು.
ಅಝೀಝ್ರ ಸೌದಿ ಅರೇಬಿಯದ ಮಾಲಕರು ಮತ್ತು ಕೆಸಿಎಫ್ ನೀಡಿದ ಧನಸಹಾಯವನ್ನು ಅಬ್ದುಲ್ ಅಝೀಝ್ರ ಕುಟುಂಬಕ್ಕೆ ಕೆಸಿಎಫ್ ಸೌದಿ ಅರೇಬಿಯದ ನಾಯಕರು ಹಸ್ತಾಂತರಿಸಿದರು.
Next Story