ಉಡುಪಿ: ನ.16ರಂದು ಹೋಟೆಲ್ ‘ಓಷಿಯನ್ ಪರ್ಲ್’ ಉದ್ಘಾಟನೆ
ಉಡುಪಿ, ನ.15: 2010ರಲ್ಲಿ ಮಂಗಳೂರಿನಲ್ಲಿ ಪ್ರಾರಂಭಿಸಿದ ‘ಹೊಟೇಲ್ ದಿ ಓಷಿಯನ್ ಪರ್ಲ್’ ಯಶಸ್ವಿ ಆರು ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಹೊಸದಿಲ್ಲಿಯಲ್ಲಿ ಹೊಟೇಲ್ ಉದ್ಯಮದ ಮುಂಚೂಣಿಯಲ್ಲಿರುವ ಜಯರಾಮ್ ಬನಾನ್ ಅವರು ಇದೀಗ ಉಡುಪಿಯಲ್ಲಿ ‘ದಿ ಓಷಿಯನ್ ಪರ್ಲ್ ಉಡುಪಿ’ಯನ್ನು ನಾಳೆ ನಾಡಿನ ಜನತೆಗೆ ಸಮರ್ಪಿಸುತಿದ್ದಾರೆ.
ಸೋಮವಾರ ಉಡುಪಿ-ಮಣಿಪಾಲ ರಸ್ತೆಯ ಕಡಿಯಾಳಿ ಜಂಕ್ಷನ್ನಲ್ಲಿ ರುವ ಓಷಿಯನ್ ಪರ್ಲ್ ಹೊಟೇಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನಾಳೆ ಅಪರಾಹ್ನ 12:30ಕ್ಕೆ ಹೊಟೇಲ್ನ ಉದ್ಘಾಟನೆ ನಡೆಯಲಿದೆ ಎಂದವರು ನುಡಿದರು.
ಮೂಲತ ಉಡುಪಿ ಜಿಲ್ಲೆಯ ಕಾರ್ಕಳದವರಾದ ಜಯರಾಮ್ ಬನಾನ್ ಅವರ ದಿ ಓಷಿಯನ್ ಪರ್ಲ್ ಹೊಟೇಲ್ನ ಮಾತೃಸಂಸ್ಥೆ ‘ಸಾಗರ್ರತ್ನ ಗ್ರೂಫ್ ಆಫ್ ಹೊಟೇಲ್ಸ್’ ಹೊಸದಿಲ್ಲಿ, ಪಂಜಾಬ್, ಚಂಡೀಗಢ ಸೇರಿದಂತೆ ಉತ್ತರ ಭಾರತದಾದ್ಯಂತ 90 ರೆಸ್ಟೋರೆಂಟ್ಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿ ಸೇರಿದಂತೆ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಇನ್ನೂ 75 ರೆಸ್ಟೋರೆಂಟ್ಗಳನ್ನು ಆರಂಭಿಸಲಾಗುವುದು ಎಂದರು.
ದೇವಾಲಯಗಳ ನಗರಿ ಉಡುಪಿಯಲ್ಲಿ ನಿರ್ಮಾಣಗೊಂಡಿರುವ ಓಷಿಯನ್ ಪರ್ಲ್ನಲ್ಲಿ ಸಾಗರ್ರತ್ನ ವೆಜ್ ರೆಸ್ಟೋರೆಂಟ್, ಕೋರಲ್ ಮಲ್ಟಿ ಕ್ವಿಜಿನ್ಡೈನ್ ರೆಸ್ಟೋರೆಂಟ್, ಟೈಡ್ 24 ಗಂಟೆಗೆ ಕಾಫಿ ಶಾಪ್, ದ ಜಾಜ್ ಲಾಂಜ್ ಬಾರ್, ಜೇಡ್, ಪಾರ್ಟಿ ಹಾಲ್ ಹಾಗೂ ಪೆಸಿಫಿಕ್ ಬ್ಯಾಂಕ್ವೆಟ್ ಹಾಲ್ ವಿಭಾಗಗಳಿವೆ.
ನೆಲ ಮಹಡಿಯಲ್ಲಿರುವ ಸಾಗರ್ರತ್ನ ವೆಜ್ ರೆಸ್ಟೋರೆಂಟ್ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಹೆಸರಾಂತ ಸ್ವಾದಿಷ್ಟ ಖಾದ್ಯಗಳ ಸವಿಯನ್ನು ಒದಗಿಸಲಿದೆ. ನಾನ್ವೆಜ್ ಪ್ರಿಯರಿಗೆ ದೇಶದ ಹಾಗೂ ಯುರೋಪಿಯನ್ ವೈವಿಧ್ಯಮಯ ನಾನ್ವೆಜ್ ಖಾದ್ಯಗಳನ್ನು ಒದಗಿಸುವ ಮೊದಲ ಮಹಡಿಯಲ್ಲಿರುವ ಕೋರಲ್, ಉತ್ತಮ ಲಾಂಜ್ ಬಾರ್ನ ಆನಂದವನ್ನು ಒದಗಿಸುವ ಜಾಝ್ ಜೊತೆಗೆ ವಿಶೇಷ ಸಂಭ್ರಮಾಚರಣೆ, ಕಾರ್ಯಾಗಾರ, ಪತ್ರಿಕಾಗೋಷ್ಠಿ ಇತ್ಯಾದಿಗಳಿಗಾಗಿ ಸುವ್ಯವಸ್ಥಿತ ಕಾನ್ಫರೆನ್ಸ್ ಹಾಲ್ ಸಹ ಇದೇ ಮಹಡಿಯಲ್ಲಿದೆ. 2, 3 ಮತ್ತು 4ನೇ ಅಂತಸ್ತಿನಲ್ಲಿ ಉತ್ಕೃಷ್ಟ ದರ್ಜೆಯ 45 ರೂಮ್ಗಳು ಇದ್ದು, 3ಸ್ವೀಟ್ ಹಾಗೂ 3 ಕ್ಲಬ್ರೂಂಗಳನ್ನು ಒಳಗೊಂಡಿದೆ. 5ನೇ ಮಹಡಿಯಲ್ಲಿ 500 ಜನರ ಸಭೆ ಸಮಾರಂಭಗಳನ್ನು ನಡೆಸಲು ಬ್ಯಾಂಕ್ವೆಟ್ಹಾಲ್ ಕೂಡಾ ಇದೆ. 2.5 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶವಿದ್ದು, ಗ್ರಾಹಕರ ಅನುಕೂಲತೆಗಾಗಿ ವ್ಯಾಲೇ ಪಾರ್ಕ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಓಷಿಯನ್ ಪರ್ಲ್ನ ಉಪಾಧ್ಯಕ್ಷ ಪಿ.ಎಂ.ಗಿರೀಶ್ ತಿಳಿಸಿದರು.
ದಿ ಓಷಿಯನ್ ಪರ್ಲ್ ಉಡುಪಿ ಇಲ್ಲಿನ ಜನರಿಗೆ ಉತ್ತಮ ಗುಣಮಟ್ಟದ ಸೇವೆ ಹಾಗೂ ದೇಶವಿದೇಶಗಳ ಉತ್ಕೃಷ್ಟ ಖಾದ್ಯಗಳನ್ನು ಒದಗಿಸುವ ಜೊತೆಗೆ ಅವರ ಶುಭ ಸಮಾರಂಭಗಳಿಗೆ ಮತ್ತಷ್ಟು ಮೆರುಗು ನೀಡಲು ಉತ್ತಮ ಹಾಲ್ ಹಾಗೂ ಪೂರಕ ವ್ಯವಸ್ಥೆಗಳನ್ನು ಒದಗಿಸುವ ಭರವಸೆ ನೀಡುತ್ತೇವೆ ಎಂದವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಸುರೇಶ್, ಜಿಎಂ ಬಿಜು ವರ್ಗೀಸ್, ಪ್ರಮೋಟರ್ ಸಲೀಂ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.