ಮಣಿಪಾಲದಲ್ಲಿ ತಂಡದಿಂದ ಕೊಲೆಯತ್ನ
ಮಣಿಪಾಲ, ನ.21: ಮಣಿಪಾಲದ ಹೊಟೇಲ್ ಭವಾನಿ ಎದುರು ಡಿಟಿ ಬಾರ್ ಬಳಿ ನ.20ರಂದು ರಾತ್ರಿ 11:15ರ ಸುಮಾರಿಗೆ ತಂಡವೊಂದು ಹೊಟೇಲ್ ಸ್ವಾಗತಕಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಹಲ್ಲೆಗೆ ಒಳಗಾಗಿರುವ ಸಂದೀಪ್ ಪೂಜಾರಿ ಎಂಬವರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಘ್ನೇಶ್ ಕೋಟ್ಯಾನ್, ಉಲ್ಲಾಸ, ಸುಮನ್ ಮತ್ತು ಇತರರು ಕೈಯಲ್ಲಿ ಮಾರಾಕಾಯುಧಗಳನ್ನು ಹಿಡಿದುಕೊಂಡು ಸಂದೀಪರನ್ನು ಕೊಲೆ ಮಾಡುವ ಉದ್ದೇಶದಿಂದ ತಲೆಗೆ, ಕೈಗೆ ಹಲ್ಲೆ ಮಾಡಿ ಮಾರಣಾಂತಿಕ ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story