ಮನುಷ್ಯನ ತಲೆಬುರುಡೆ, ಎಲುಬು ಪತ್ತೆ
ಕಾರ್ಕಳ, ಡಿ.17: ಇಲ್ಲಿಗೆ ಸಮೀಪದ ನಿಂಜೂರು ಎಂಬಲ್ಲಿ ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಮಣ್ಣಿನಲ್ಲಿ ಹೂತಿಟ್ಟ ಮನುಷ್ಯನ ತಲೆ ಬುರುಡೆ ಹಾಗೂ ಕಾಲಿನ ಬೆರಳಿನ ಎಲುಬುಗಳು ಪತ್ತೆಯಾಗಿವೆ. ನಿಂಜೂರು ಮುಡಲ್ಲು ನಿವಾಸಿ ಪಳ್ಳಿ ಗ್ರಾಪಂ ಸದಸ್ಯ ಸಂತೋಷ ಶೆಟ್ಟಿ ಎಂಬವರು ತನ್ನ ಮನೆ ಪಕ್ಕದಲ್ಲಿ ದನಗಳನ್ನು ಹುಡುಕಿಕೊಂಡು ಹೋಗಿದ್ದಾಗ, ಅಲ್ಲಿ ಮಣ್ಣು ಅಗೆದು ಹೂತು ಹಾಕಿದ ಕುರುಹು ಕಂಡುಬಂತು.
ಕೂಡಲೇ ಅವರು ಈ ವಿಚಾರವನ್ನು ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಇತರರಿಗೆ ತಿಳಿಸಿದರು. ನಂತರ ಹೂತ ಜಾಗದಲ್ಲಿ ಸ್ವಲ್ಪಮಣ್ಣನ್ನು ತೆಗೆದು ಪರಿಶೀಲಿಸಿದಾಗ ಮನುಷ್ಯನ ತಲೆ ಬುರುಡೆ ಹಾಗೂ ಕಾಲಿನ ಬೆರಳಿನ ಎಲುಬುಗಳು ಕಂಡು ಬಂದಿವೆ. ಆಸುಪಾಸಿನಲ್ಲಿ ಮೃತಪಟ್ಟ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story