ಭೂಮಿ ಕೇಂದ್ರದಲ್ಲಿ ಪಹಣಿ ವಿತರಣೆ ತಾತ್ಕಾಲಿಕ ಸ್ಥಗಿತ
ಮಂಗಳೂರು, ಜ.2: ದ.ಕ. ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳ ಭೂಮಿ ಕೇಂದ್ರದಲ್ಲಿ ಜ.2ರಿಂದ 10 ದಿನಗಳ ಕಾಲ 2016-17 ಹಿಂಗಾರು ಸಾಲಿನ ಪಹಣಿಗಳಿಗೆ ಡಿಜಿಟಲ್ ಸೈನಿಂಗ್ ಪ್ರಕ್ರಿಯೆ ನಡೆ ಯುತ್ತಿರುವುದರಿಂದ ಸದರಿ ಕೇಂದ್ರದಲ್ಲಿ ಪಹಣಿ ವಿತರಿಸಲು ಅಸಾಧ್ಯ ವಾಗಿದೆ.
ಸಾರ್ವಜನಿಕರು ಈ ಅವಧಿಯಲ್ಲಿ ತಾಲೂಕಿನ ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪಹಣಿ ಪತ್ರಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
Next Story