ನಾಳೆಯಿಂದ ವಿವೇಕ್ ಬ್ಯಾಂಡ್ ಅಭಿಯಾನ
ಮಂಗಳೂರು, ಜ.10: ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ‘ವಿವೇಕ್ ಬ್ಯಾಂಡ್’ ಯುವ ಅಭಿಯಾನವನ್ನು ‘ಸಮರ್ಥ ಭಾರತ’ ಸಂಘಟನೆ ವತಿಯಿಂದ ಜ.12ರಿಂದ 26ರವರೆಗೆ ರಾಜ್ಯಾದ್ಯಂತ ಆಯೋಜಿಸಲಾಗಿದೆ ಎಂದು ವಿಕಾಸ್ ಕಾಲೇಜಿನ ಸಲಹೆಗಾರ ಡಾ. ಅನಂತಪ್ರಭು ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ವಿವೇಕ್ ಬ್ಯಾಂಡ್ ಅಭಿಯಾನವು ಭಾರತ ಎದುರಿಸುತ್ತಿರುವ ಸಮಕಾಲೀನ ಸಮಸ್ಯೆಗಳಲ್ಲಿ ಒಂದಾದ ‘ಕಾರ್ನಿಯಾ ಅಂಧತ್ವ’ದ ಕುರಿತು ಸಾಮಾಜಿಕ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಜಲಜಾಕ್ಷಿ, ಚಿತ್ರನಟ ನವೀನ್ ಪಡೀಲ್, ವಿದುಷಿ ಶ್ರೀಲತಾ, ಸಂಘಟನೆಯ ಸದಸ್ಯ ಹಿತೇಶ್ ಉಪಸ್ಥಿತರಿದ್ದರು.
Next Story