ಫ್ಲೇಕ್ಸ್ಗೆ ಬೆಂಕಿ: ದೂರು
ಉಪ್ಪಿನಂಗಡಿ, ಜ.12: ಕಾರ್ಯಕ್ರಮದ ಫ್ಲೇಕ್ಸ್ವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆಯ ಸಮೀಪ ನಡೆದಿದೆ. ಎಸ್ಸೆಸ್ಸ್ೆ ವತಿಯಿಂದ ಜ.14ರಂದು ನೆಲ್ಯಾಡಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಎಸ್ಸೆಸ್ಸ್ೆ ಮುಖಂಡರಾದ ಎ.ಪಿ. ಉಸ್ತಾದ್ ಹಾಗೂ ಸೈಯದ್ ಕೂರತ್ ತಂಳ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ವಿವರಗಳನ್ನೊಳಗೊಂಡ ಹಾಗೂ ಆಗಮಿಸುವ ಗಣ್ಯರಿಗೆ ಶುಭ ಕೋರಿ ಇಲ್ಲಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಂಚನ ಕ್ರಾಸ್ ಬಳಿ ್ಲ್ಲೆಕ್ಸ್ವೊಂದನ್ನು ಹಾಕಲಾಗಿತ್ತು. ಆದರೆ ಗುರುವಾರ ಬೆಳಗ್ಗೆ ಆ ್ಲೆಕ್ಸ್ಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟ ರೀತಿಯಲ್ಲಿ ಕಂಡುಬಂದಿದೆ ಎಂದು ಎಸ್ಸೆಸ್ಸ್ೆಮುಖಂಡರು ತಿಳಿಸಿದ್ದಾರೆ.
Next Story