‘ಕೋಡಿಜಾಲ್ ಟ್ರೇಡರ್ಸ್’ ಶುಭಾರಂಭ
ಮಂಗಳೂರು, ಮೇ 22: ನಗರದ ಬಂದರ್ನ ಅಝೀಝುದ್ದೀನ್ ರಸ್ತೆಯ ರೀಗಲ್ ಸ್ಕ್ವೇರ್ ಕಟ್ಟಡದಲ್ಲಿ ನೂತನ ‘ಕೋಡಿಜಾಲ್ ಟ್ರೇಡರ್ಸ್’ ಸೋಮವಾರ ಶುಭಾರಂಭಗೊಂಡಿತು.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಅಲ್ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೇಲ್ ನೂತನ ಮಳಿಗೆಯನ್ನು ಉದ್ಘಾಟಿಸಿ ದುವಾ ನೆರವೇರಿಸಿದರು.
ಮೂಡದ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಕೋಡಿಜಾಲ್ನ ರಿಫಾಯಿ ಜುಮಾ ಮಸೀದಿಯ ಖತೀಬ್ ಅಬೂಬಕರ್ ಸಖಾಫಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಎಪಿಎಂಸಿ ಸದಸ್ಯ ಬಿ.ರಾಘವ ಶೆಟ್ಟಿ, ಅಬ್ದುಲ್ ಖಾದರ್ ಕೆ.ಎಸ್.ಕೋಡಿಜಾಲ್, ಅಬೂಬಕರ್ ಕೋಡಿಜಾಲ್, ಕೆ.ಸಿ.ರೋಡ್ ಫಲಾಹ್ ಎಜುಕೇಶನಲ್ ಇನ್ಸ್ಟಿಟ್ಯೂಷನ್ನ ಮಾಜಿ ಅಧ್ಯಕ್ಷ ಅಬ್ಬಾಸ್ ಮಜಲ್, ಕಾಟಿಪಳ್ಳ ಎಂಜೆಎಂ ಅಧ್ಯಕ್ಷ ತಮೀಮ್ ಕಾಟಿಪಳ್ಳ, ಹನೀಫ್ ಹಾಜಿ ಬಂದರ್, ಸಂಸ್ಥೆಯ ಪಾಲುದಾರರಾದ ಅಮೀರ್ ಕೋಡಿಜಾಲ್, ಅಝರ್ ಕೋಡಿಜಾಲ್ ಉಪಸ್ಥಿತರಿದ್ದರು.
‘ಕೋಡಿಜಾಲ್ ಟ್ರೇಡರ್ಸ್’ ಸುಪಾರಿ ಮಚೆಂಟ್ಸ್ ಆ್ಯಂಡ್ ಕಮಿಷನ್ ಏಜೆಂಟ್ ಸಂಸ್ಥೆಯಾಗಿದ್ದು, ಸುಪಾರಿ ಹಾಗೂ ಕಾಡು ಉತ್ಪತ್ತಿಗಳ (ಹಿಲ್ ಪ್ರೊಡಕ್ಟ್ಸ್) ವಿತರಕರಾಗಿದ್ದಾರೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ. ರಹಿಮಾನ್ ಕೋಡಿಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪಾಲುದಾರ ಅಮೀರ್ ಕೋಡಿಜಾಲ್ ವಂದಿಸಿದರು.