ಕುಂಜತ್ತೂರು: ಅಮ್ಮಿಚ್ಚ ಸ್ಮರಣಾರ್ಥ ರಕ್ತದಾನ ಶಿಬಿರ
ಮಂಗಳೂರು, ಮೇ 23: ಬ್ಲಡ್ ಡೋನರ್ಸ್ ಮಂಗಳೂರು, ಖಿದ್ಮತುಲ್ ಇಸ್ಲಾಂ ಕುಂಜತ್ತೂರು ಯುನಿಟ್ನ ಜಂಟಿ ಆಶ್ರಯ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರವು ಕುಂಜೂತ್ತೂರಿನ ಮಾಸ್ಕೋ ಯುನಿಟಿ ಹಾಲ್ ನಲ್ಲಿ ನಡೆಯಿತು.
ಅಮ್ಮಿಚ್ಚ ಕುಂಜತ್ತೂರು ಅವರ ಸ್ಮರಣಾರ್ಥಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ ಹಾಗೂ ಸಮಾಜ ಸೇವೆಯಲ್ಲಿ ಸಹಕರಿಸಿದ, ಸಮಾಜ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಸೈಯದ್ ಬದ್ರುದ್ದೀನ್ ತಂಙಳ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಕುಂಬ್ಳೆ ಪೊಲೀಸ್ ಠಾಣಾ ನೀರೀಕ್ಷಕ ವಿ.ವಿ.ಮನೋಜ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ತಲಪಾಡಿ ತಾ.ಪಂ. ಸದಸ್ಯ ಅಬೂಬಕರ್ ಸಿದ್ದೀಕ್ ಕೊಳಂಗೆರೆ, ಡಾ.ಖಾದರ್, ಕಾಸರಗೋಡು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಶದ್ ವರ್ಕಾಡಿ, ಮುಸ್ತಫಾ ಉದ್ಯಾವರ, ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಯು.ಕೆ.ಸೈಫುಲ್ಲಾ ತಂಙಳ್ ಸ್ವಾಗತಿಸಿದರು. ಬ್ಲಡ್ ಡೋನರ್ಸ್ನ ಸದಸ್ಯ ರಫೀಕ್ ಯು.ಎಂ. ಮೌಲಾನ ರೋಡ್ ವಂದಿಸಿದರು. ಇಸ್ಮಾಯೀಲ್ ಕಾರ್ಯಕ್ರಮವನ್ನು ನಿರೂಪಿಸಿದರು.