ಒಣ ಮೀನು ಸಂಘದ ನಿಯೋಗದಿಂದ ವಿಧಾನ ಸೌಧದಲ್ಲಿ ಕೃಷಿ ಸಚಿವರ ಭೇಟಿ
ಜಿ.ಎಸ್.ಟಿ.ಯಿಂದ ಹೊರಗಿಡಲು ಮನವಿ
ಮಂಗಳೂರು, ಜೂ. 13: ಒಣ ಮೀನು ಸಂಘದ ನಿಯೋಗವು ಸಚಿವ ಯು.ಟಿ.ಖಾದರ್ ರೊಂದಿಗೆ ವಿಧಾನ ಸೌಧಕ್ಕೆ ತೆರಳಿ ಅಲ್ಲಿ ಕೃಷ್ಣೇಬೈರೇಗೌಡ ರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿತು.
ಒಣ ಮೀನಿಗೆ ಹಾಕಿರುವ ಜಿ.ಎಸ್.ಟಿ. ತೆರಿಗೆಯನ್ನು ಕಡಿಮೆ ಮಾಡಬೇಕು ಹಾಗೂ ಮಂಜುಗಡ್ಡೆಯ ದರ ಇಳಿಸಬೇಕೆಂಬ ಬೇಡಿಕೆಯೊಂದಿಗೆ ಯು.ಎಸ್. ಅಬೂಬಕರ್ ನೇತೃತ್ವದ ಒಣ ಮೀನುಗಾರರ ಸಂಘದ ನಿಯೋಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ರೊಂದಿಗೆ ವಿಧಾನ ಸೌಧಕ್ಕೆ ತೆರಳಿ ಕೃಷಿ ಸಚಿವ ಕೃಷ್ಣೇಬೈರೇಗೌಡ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಸಚಿವರು ಭರವಸೆ ನೀಡಿದರು.
Next Story