ಕೊಡಗು: ಜ.19 ರಿಂದ 21 ರ ವರೆಗೆ ರಾಜ್ಯ ಮಟ್ಟದ ಪ್ರತಿಭೋತ್ಸವ
ಚಿಕ್ಕಮಗಳೂರು, ಜ.18: ಎಸ್ಎಸ್ಎಫ್ ವತಿಯಿಂದ ಜ.19ರಿಂದ 21ರವರೆಗೆ ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮವು ಕೊಡಗು ಜಿಲ್ಲೆಯ ಮರ್ಕಝುಲ್ ಹಿದಾಯ, ಕೊಟ್ಟಮುಡಿ ಎಂಬಲ್ಲಿ ನಡೆಯಲಿದೆ ಎಂದು ಎಸ್ಎಸ್ಎಫ್ನ ರಾಜ್ಯ ನಾಯಕ ಹುಸೈನ್ ಸಅದಿ ಹೊಸ್ಮಾರು ತಿಳಿಸಿದ್ದಾರೆ.
ಅವರು ಗುರುವಾರ ಈ ಕುರಿತು ಹೇಳಿಕೆ ನೀಡಿದ್ದು, ಸಂಜೆ 7 ಉದ್ಘಾಟನಾ ಸಮಾರಂಭ ನಡೆಯಲಿದೆ. ಧ್ವಜರೋಹಣವನ್ನು ಅಲ್ಹಾಜ್ ಮಹ್ಮೂದ್ ಉಸ್ತಾದ್ ಎಡಪ್ಪಲಂ ನೆರವೇರಿಸಲಿದ್ದಾರೆ. ದುಆ ಹಾಗೂ ಅಧ್ಯಕ್ಷತೆಯನ್ನು ಸೆಯ್ಯದ್ ಹಾಮೀಂ ತಂಙಳ್ ವಹಿಸಲಿದ್ದಾರೆ. ಕಂಝುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ.
ಸಮಾರೋಪ ಸಮಾರಂಭ ಜ.21ರಂದು ಭಾನುವಾರ ಮದ್ಯಾಹ್ನ 2ಕ್ಕೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಸ್.ಎಫ್. ರಾಜಾಧ್ಯಕ್ಷರಾದ ಇಸ್ಮಾಈಲ್ ಸಖಾಫಿ ಕೊಡಗು ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಭಾಷಣರತ್ನ ಎಂ.ಎಸ್.ಎಂ.ಝೈನಿ ಕಾಮಿಲ್ ಸಖಾಫಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಎಸ್.ವೈ.ಎಸ್. ರಾಜ್ಯಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಸುನ್ನಿ ಸಂಘಟನೆಗಳ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ, ಎನ್.ಕೆ. ಶಾಫೀ ಸಅದಿ ಬೆಂಗಳೂರು. ಅತೂರು ಸಅದ್ ಮುಸ್ಲಿಯಾರ್, ಶಿಕ್ಷಣ ಸಚಿವ ತನ್ವೀರ್ಸೇಠ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.