ದಾವಣಗೆರೆ: ಮಡ್ರಳ್ಳಿ ಪಿಡಿಒ ಮನೆಗೆ ಎಸಿಬಿ ದಾಳಿ; ಅಪಾರ ಪ್ರಮಾಣದ ಆಸ್ತಿ ಪತ್ತೆ
ದಾವಣಗೆರೆ, ಎ.10: ಜಗಳೂರು ತಾಲೂಕಿನ ಮಡ್ರಳ್ಳಿ ಗ್ರಾಮ ಪಂಚಾಯತ್ ಪಿಡಿಒ ಎ ಟಿ ನಾಗರಾಜ್ ಮನೆಗೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಅಪಾರ ಪ್ರಮಾಣದ ಆಸ್ತಿ, 2 ಐಷಾರಾಮಿ ಕಾರುಗಳು, 2 ಲಾರಿ, 4 ಬೈಕ್, 5 ಮನೆಗಳು ಅವರ ಹೆಸರಿನಲ್ಲಿರುವುದು ಪತ್ತೆಯಾಗಿವೆ.
ಜಗಳೂರು ತಾಲೂಕಿನ ಗೌರಿಪುರದಲ್ಲಿ 2 ಮನೆ, ಹಿರೆಮಲ್ಲನಹೊಳೆಯಲ್ಲಿ 1 ಮನೆ, ಕೂಡ್ಲಿಗಿ ಹಾಗೂ ದಾವಣಗೆರೆಯ ಎಸ್ ಎಸ್ ಬಡಾವಣೆಯಲ್ಲಿ ಒಂದು ಮನೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಎಸಿಬಿ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇಬ್ಬರು ಡಿವೈಎಸ್ಪಿ, ಐವರು ಸಿಪಿಐ, 20ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ನಾಗರಾಜ್ ಕೂಡ್ಲಿಗಿ ಹಾಗೂ ದಾವಣಗೆರೆಯಲ್ಲಿ ವ್ಯವಹಾರ ಮಾಡಲು ಕಚೇರಿಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
Next Story