ಜಗಳೂರು: ಹಾವು ಕಡಿದು ರೈತ ಮಹಿಳೆ ಸಾವು
ಜಗಳೂರು,ನ.5: ಮೆಕ್ಕೆಜೋಳ ಮುರಿಯುತ್ತಿದ್ದ ರೈತ ಮಹಿಳೆಯೊಬ್ಬರು ಹಾವು ಕಡಿದು ಮೃತಪಟ್ಟ ಘಟನೆ ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಹಾಲೇಕಲ್ಲು ಗ್ರಾಮದ ಕೆಂಚಮ್ಮ(27) ಮೃತ ರೈತ ಮಹಿಳೆ. ಹೊಲದಲ್ಲಿ ಮೆಕ್ಕೆಜೋಳ ಮುರಿಯಲು ಹೋಗಿದ್ದಾಗ ಹಾವೊಂದು ಆಕೆಗೆ ಕಚ್ಚಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಆಕೆ ಸಾವನ್ನಪ್ಪಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story