ಶಿವಮೊಗ್ಗ: ಮಲೆನಾಡು, ವಾರಾಹಿ ಸುತ್ತಮುತ್ತ ಭೂಕಂಪನ
ಶಿವಮೊಗ್ಗ, ಫೆ. 3: ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ವಾರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾದ ಬಗ್ಗೆ ವರದಿಯಾಗಿದೆ.
ಮಧ್ಯರಾತ್ರಿ ಒಂದುವರೆ ಗಂಟೆ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಸುಮಾರು ಎರಡು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದು, ಪಾತ್ರೆಪಗಡೆಗಳು ಅಲುಗಾಡಿದ, ಕೆಳಕ್ಕೆ ಬಿದ್ದ ಅನುಭವವಾಗಿದ್ದು ಭಯಭೀತರಾದ ಜನರು ಮನೆಯಿಂದ ಹೊರಕ್ಕೋಡಿ ಬಂದಿದ್ದಾರೆ.
ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ ಶುಂಠಿ ಹಕ್ಲು, ಯಡೂರು, ಶುಂಠಿಹಕ್ಲು, ಕರುಣಾಪುರ, ಹನಸ, ಮೇಗರವಳ್ಳಿ, ಸುಣ್ಣದಮನೆ, ಹಾಲಿಗೆ, ಡಿಂಡ ಗ್ರಾಮದ ಸುತ್ತಮುತ್ತ ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ರಿಕ್ಟರ್ ಮಾಪನದಲ್ಲಿ 2.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.
Next Story