ಐಟಿ ದಾಳಿಗೆ ನಮ್ಮ ವಿರೋಧವಿಲ್ಲ. ಆದ್ರೆ ಕಾಂಗ್ರೆಸ್ –ಜೆಡಿಎಸ್ ನವರೇ ಏಕೆ ಟಾರ್ಗೆಟ್ : ಸಿದ್ದರಾಮಯ್ಯ
ಮೈಸೂರು, ಎ.16: ಐಟಿ ದಾಳಿಗೆ ನಮ್ಮ ವಿರೋಧವಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿ ಎಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಯಾಕೆ ಐಟಿ ದಾಳಿ ನಡೆಸಲಾಗುತ್ತದೆ ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರ ಮನೆ ಮೇಲೆ ಯಾಕೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಇಲ್ಲ. ಬಿಜೆಪಿಯವರು ಏನು ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾ ? ಅವರ ಮೇಲೆ ಏಕೆ ಐಟಿ ದಾಳಿ ಇಲ್ಲ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಲತಾ ಮುಖಕ್ಕೆ ಮಂಗಳಾರತಿ ಮಾಡಲು ನಾನು ಹೇಳಿಲ್ಲ. ಆದರೆ ನನ್ನ ಹೆಸರು ಹೇಳಿಕೊಂಡು ಸುಮಲತಾ ಪರ ಮತ ಯಾಚಿಸುವವರ ಮುಖಕ್ಕೆ ಮಂಗಳಾರತಿ ಮಾಡಿ ಎಂದು ಹೇಳಿರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Next Story