50 ಕೆಜಿ ತೂಕದ ಹೆಬ್ಬಾವು ರಕ್ಷಣೆ !
ಸಾಂದರ್ಭಿಕ ಚಿತ್ರ
ಮಂಡ್ಯ, ನ.2: ಶ್ರೀರಂಗಪಟ್ಟಣದ ಎಚ್.ಪಿ ಪೆಟ್ರೋಲ್ ಬಂಕ್ ಬಳಿ 12 ಅಡಿ ಉದ್ದ, 50 ಕೆಜಿ ತೂಕವಿದ್ದ ಹೆಬ್ಬಾವನ್ನು ಉರಗ ತಜ್ಞ ಸ್ನೇಕ್ ಸುಲ್ತಾನ್ ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟದ್ದಾರೆ.
ಆಹಾರ ಅರಸಿ ಬಂದ ಹೆಬ್ಬಾವನ್ನು ಗಮನಿಸಿದ ನೌಕರರು ಕೂಡಲೇ ಸ್ನೇಕ್ ಸುಲ್ತಾನ್ ಎಂಬವರನ್ನು ಕರೆಸಿಕೊಂಡರು. ಹಾವನ್ನು ಹಿಡಿದ ಸುಲ್ತಾನ್ ಅದನ್ನು ಅರಣ್ಯಕ್ಕೆ ಬಿಟ್ಟರು.
ಹಾವನ್ನು ನೋಡಲು ಜನ ಮುಗಿ ಬಿದ್ದಿದ್ದು, ಹೆಗಲ ಮೇಲೆ ಹಾಕಿಕೊಂಡು ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
Next Story