ಪ್ರೊ.ಎಚ್.ಎಲ್.ಕೇಶವಮೂರ್ತಿ ಪತ್ನಿ ಜಿ.ಬಿ.ಜಯವಾಣಿ ನಿಧನ
ಮಂಡ್ಯ, ಡಿ.27: ಸಾಹಿತಿ, ಪತ್ರಕರ್ತ, ವಿಚಾರವಾದಿ ಪ್ರೊ.ಎಚ್.ಎಲ್.ಕೇಶವಮೂರ್ತಿ (ಎಚ್ಚೆಲ್ಕೆ) ಪತ್ನಿ ಜಿ.ಬಿ.ಜಯವಾಣಿ(69) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಮಾಜಿ ಶಾಸಕ ದಿ.ಬೊಮ್ಮೇಗೌಡರ ಪುತ್ರಿಯಾದ ಅವರು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಜಯವಾಣಿ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಾಗಿದ್ದ ಎಚ್ಎಲ್ಕೆ ಅವರ ಸ್ಮಾರಕ ಉಪನ್ಯಾಸ ಮತ್ತು ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಗುರುಪ್ರಸಾದ್ ಕೆರಗೋಡು ತಿಳಿಸಿದ್ದಾರೆ .
Next Story