ಗೋಡ್ಸೆ ಪೂಜೆ ಮಾಡುವವರಿಂದ ದೇಶ ಭಕ್ತಿ ಕಲಿಯಬೇಕಿಲ್ಲ: ಸಂಸದ ಹೆಗಡೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು,ಫೆ.1: ಗೋಡ್ಸೆ ಪೂಜೆ ಮಾಡುವವರಿಂದ ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಗಾಂಧೀಜಿ ಬಗ್ಗೆ ಕೆಟ್ಟದಾಗಿ ಮಾತನಾಡುವ ಅನಂತಕುಮಾರ್ ಹೆಗಡೆಗೆ ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿ ಗೊತ್ತಿಲ್ಲ, ಅಹಿಂಸಾ ಮಾರ್ಗದಲ್ಲಿ ಯಾವುದಾದರೂ ಒಂದು ದೇಶ ಸ್ವಾತಂತ್ರ್ಯ ಪಡೆದಿದೆ ಎಂದರೆ ಅದು ಭಾರತ ಮಾತ್ರ ಎಂದು ಹೇಳಿದರು.
ಗೋಡ್ಸೆ, ಸಾರ್ವಕರ್ ಅನ್ನು ಪೂಜೆ ಮಾಡುವವರು ಇನ್ನೇನು ಮಾತನಾಡಲು ಸಾಧ್ಯ, ಅವರು ಗಾಂಧಿಯನ್ನು ಹೇಗೆ ಒಪ್ಪಿಕೊಳ್ಳುತ್ತಾರೆ. ಅನಂತಕುಮಾರ್ ಹೆಗಡೆಗೆ ಇನ್ನೂ ವಯಸ್ಸಾಗಿಲ್ಲ, ಪಾಪ ಅವರಿಗೆ ಸ್ವಾತಂತ್ರ್ಯದ ಅವರಿಲ್ಲ, ಹಾಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಅವರಿಂದ ದೇಶಭಕ್ತಿ ಕಲಿಯಬೇಕಿಲ್ಲ ಎಂದು ಹೇಳಿದರು.
Next Story