ಕೊರೋನ ವೈರಸ್: 'ಸರಕಾರಿ ಶಾಲೆ, ಕಚೇರಿಗಳಿಗೆ ರಜೆ' ಎಂಬ ವದಂತಿಗಳ ಬಗ್ಗೆ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.11: ರಾಜ್ಯ ಸರಕಾರವು ಕೊರೋನ ವೈರಸ್ ಅನ್ನು ಸಾಂಕ್ರಾಮಿಕ ಪರಿಸ್ಥಿತಿ ಎಂದು ಘೋಷಿಸಿ, ಶಾಲೆಗಳು, ಕಚೇರಿಗಳನ್ನು ಮುಚ್ಚುವಂತೆ ಆದೇಶಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.
'ಸರಕಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಪ್ರತಿದಿನ ನಡೆಸುತ್ತಿರುವ ಸುದ್ದಿಗೋಷ್ಠಿಗಳಲ್ಲಿ ತಿಳಿಸಲಾಗುತ್ತಿದೆ. ಈ ಸಂಬಂಧ ಸರಕಾರದ ವತಿಯಿಂದ ಯಾವುದೇ ರಜೆಗಳನ್ನಾಗಲಿ, ಆದೇಶವನ್ನಾಗಲಿ ಹೊರಡಿಸಲಿಲ್ಲ. ಶಾಲೆಗಳು, ಕಚೇರಿಗಳು ಹಾಗೂ ಇತರ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸರಕಾರದಿಂದ ಅಧಿಕೃತವಾಗಿ ಹೊರಡಿಸುವ ಆದೇಶಗಳನ್ನು ಮಾತ್ರ ಪರಿಗಣಿಸಿ, ಸುಳ್ಳು ಸುದ್ದಿಗಳು, ವದಂತಿಗಳಿಗೆ ಕಿವಿಗೊಡದಂತೆ ಆಯುಕ್ತರು ವಿನಂತಿಸಿದ್ದಾರೆ.
Next Story