ಮೈಸೂರು: ಹಲವು ಗ್ರಾಮಗಳಲ್ಲಿ ಭೂಮಿ ಕಂಪನ
ಮೈಸೂರು,ಎ.3: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿ ಜನರು ಮನೆಯಿಂದ ಹೊರ ಬಂದ ಘಟನೆ ನಡೆದಿದೆ.
ಲಾಕ್ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿದ್ದ ಜನರಿಗೆ ಶುಕ್ರವಾರ ಸಂಜೆ 5 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದರಿಂದ ಭಯಭೀತರಾದ ಜನ ಮನೆಯಿಂದ ಹೊರ ಬಂದು ಗುಂಪು ಗುಂಪಾಗಿ ನಿಂತರು.
ತಾಲೂಕಿನ ಸಾಲಿಗ್ರಾಮ, ಅಂಕನಹಳ್ಳಿ, ಚುಂಚನಕಟ್ಟೆ, ಹೊಸೂರು, ತಂದ್ರೆ, ಕರ್ಪೂರವಳ್ಳಿ, ಕಟ್ನಾಳು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೇ ರೀತಿ ಪಿರಿಯಾಪಟ್ಟಣ ತಾಲೂಕಿನ ಹರವೆ, ಹಿರಿಕ್ಯಾತನಹಳ್ಳಿಗಳಲ್ಲೂ ಅನುಭವವಾಗಿದೆ ಎಂದು ತಿಳಿದು ಬಂದಿದೆ.
Next Story