ಪಾಂಡವಪುರ: ತಮಿಳುನಾಡಿಗೆ ಕಬ್ಬು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ರೈತರ ಪ್ರತಿಭಟನೆ
ಪಾಂಡವಪುರ, ಜು.27: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ವ್ಯಾಪ್ತಿಯ ಕಬ್ಬನ್ನು ತಮಿಳುನಾಡು ರಾಜ್ಯದ ಶಕ್ತಿ ಶುಗರ್ಸ್ ಗೆ ಕಬ್ಬು ಸಾಗಿಸುತ್ತಿದ್ದ ಲಾರಿಗಳನ್ನು ರೈತರು ಸೋಮವಾರ ತಡೆದು ಪ್ರತಿಭಟಿಸಿದರು.
ನಿರಾಣಿ ಶುಗರ್ಸ್ ಪಿಎಸ್ಎಸ್ಕೆಯನ್ನು ಗುತ್ತಿಗೆ ನೀಡಿದ್ದು, ಸದ್ಯದಲ್ಲೇ ಕಾರ್ಖಾನೆ ಆರಂಭವಾಗುತ್ತಿದೆ. ಆದರೂ ಬೇರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣೆ ಮಾಡಲಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಸಾಗಾಣೆ ನಿರ್ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ಸೇನೆ ಜಿಲ್ಲಾ ಉಪಾಧ್ಯಕ್ಷ ಮಂಡಿಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್, ಪಿಎಸ್ಎಸ್ಕೆ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಮುದ್ದುಕೃಷ್ಣ, ಉಪಾಧ್ಯಕ್ಷ ರಮೇಶ್, ಕ ಕೆನ್ನಾಳು ವೇಣುಗೋಪಾಲ್, ಹಾರೋಹಳ್ಳಿ ದಳವಾಯಿಗೌಡ, ಕಾಂತರಾಜು, ಹಿರೇಮರಳಿ ರಾಜಶೇಖರ್, ವಿಷ್ಣುವಿಠಲ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Next Story