ಕೂಲಿ ಕಾರ್ಮಿಕ ದಂಪತಿಯ ಮಗುವಿಗೆ ಉಚಿತ ಶಿಕ್ಷಣ ಕಲ್ಪಿಸಲು ಮುಂದಾದ ಹೈಕೋರ್ಟ್ ವಕೀಲ
ಬೆಂಗಳೂರು, ಅ.18: ಯಾದಗಿರಿ ಜಿಲ್ಲೆಯ ಮಾಲ್ರೋಜಾ ಗ್ರಾಮದಿಂದ ಬದುಕು ಕಟ್ಟಿಕೊಳ್ಳಲು ರಾಜಧಾನಿಗೆ ಬಂದಿದ್ದ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವಿಗೆ ಪಿಯುಸಿಯವರೆಗೆ ಉಚಿತ ಶಿಕ್ಷಣ ಕಲ್ಪಿಸಲು ಹೈಕೋರ್ಟ್ ವಕೀಲ ಎಚ್.ವೆಂಕಟೇಶ್ ದೊಡ್ಡೇರಿ ಅವರು ಮುಂದಾಗಿದ್ದಾರೆ.
ಬೆಂಗಳೂರು ನಗರವೊಂದರ ಬಡಾವಣೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಶಾಣಪ್ಪ ಮತ್ತು ವಿಜಯಲಕ್ಷ್ಮಿ ದಂಪತಿಯು ತೊಡಗಿದ್ದಾಗ ಶಾಲೆಗೆ ಹೋಗದೇ ಅವರ ಜೊತೆಗಿದ್ದು ಕಾಲ ಕಳೆಯುತ್ತಿದ್ದ ಅವರ ಮಗಳ ವಿಚಾರ ದೊಡ್ಡೇರಿ ಅವರ ಗಮನಕ್ಕೆ ಬಂದಿದೆ.
ತಕ್ಷಣ ದೊಡ್ಡೇರಿ ಅವರು ಪೋಷಕರೊಂದಿಗೆ ಮಾತನಾಡಿ, ಮಗುವನ್ನು ಶಾಲೆಗೆ ಸೇರಿಸಲು ಮನವೊಲಿಸಿ, ನೆಲಮಂಗಲದ ಹರ್ಷ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಇದಕ್ಕೆ ಶಾಲೆಯ ಮಾಲಕರೂ ದೊಡ್ಡೇರಿ ಅವರೊಂದಿಗೆ ನೆರವಾಗಲು ಕೈಜೋಡಿಸಿದ್ದಾರೆ. ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆ, ವಿದ್ಯಾರ್ಥಿ ನಿಲಯಗಳಿಗೆ ಸೇರಿಸುವ ಕಾರ್ಯದಲ್ಲಿ ಎಚ್.ವೆಂಕಟೇಶ್ ದೊಡ್ಡೇರಿ ಪ್ರತಿಷ್ಠಾನ ನಿರತವಾಗಿದೆ.
Next Story