ಸಕಲೇಶಪುರ: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
ಸಕಲೇಶಪುರ, ಜೂ.13 : ಕೌಟುಂಬಿಕ ಕಲಹದಿಂದ ಪತ್ನಿಯನ್ನು ಕೊಂದ ನಂತರ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬನವಾಸೆ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.
ಸೀನಪ್ಪ(40) ಮತ್ತು ಸುಜಾತ (35), ತಾಲೂಕಿನ ಬಾಳ್ಳುಪೇಟೆ ಗ್ರಾಮದ ಸಿದ್ದಣ್ಣಯ್ಯ ಪ್ರೌಢ ಶಾಲೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸೀನಪ್ಪ ಮತ್ತು ಸುಜಾತ ನಡುವೆ ಕಳೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು ಹಾಗೂ ಇಬ್ಬರಿಗೂ 2 ಮಕ್ಕಳಿದ್ದಾರೆ.
ಅನುಮಾನದ ಪಿಶಾಚಿಯಾಗಿದ್ದ ಸುಜಾತ ಗಂಡನೊಂದಿಗೆ ನಿತ್ಯ ಜಗಳ ಆಡುತ್ತಿದ್ದಳು. ಇದೇ ಕಾರಣಕ್ಕೆ ಒಮ್ಮೆ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಳು. ರಾಜೀ ಪಂಚಾಯ್ತಿ ನಂತರ ಇಬ್ಬರೂ ಜೊತೆಯಲ್ಲಿದ್ದರು. ಆದರೆ ಸುಜಾತಗೆ ಅನುಮಾನ ಬಿಡದ ಕಾರಣ, ಕಳೆದ ರಾತ್ರಿಯೂ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದು ಅತಿರೇಖಕ್ಕೆ ಹೋಗಿ ಸೀನಪ್ಪ ಹೆಂಡತಿಯ ತಲೆಗೆ ಹೊಡೆದು ಸಾಯಿಸಿದ್ದಾನೆ. ನಂತರ ಹೆದರಿ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಇಬ್ಬರು ಮಕ್ಕಳು ಅನಾಥವಾಗಿವೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ