ಬರ್ಹಿದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ
ಹನೂರು, ಜ.18: ಬರ್ಹಿದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿಂದು ಬೆಳಗ್ಗೆ ನಡೆದಿದೆ.
ಬಂಡಳ್ಳಿ ಗ್ರಾಮದ ಮಡಿವಾಳರ ಬೀದಿಯ ನಿವಾಸಿ ಚನ್ನಶೆಟ್ಟಿ (60) ಹೆಜ್ಜೇನು ದಾಳಿಗೆ ಒಳಗಾದ ವ್ಯಕ್ತಿ. ಅವರು ಇಂದು ಬೆಳಗ್ಗೆ
ಬರ್ಹಿದೆಸೆಗೆ ತೆರಳಿದಾಗ ಹೆಜ್ಜೇನು ದಾಳಿ ನಡೆಸಿದೆ ಎನ್ನಲಾಗಿದೆ. ಇದರಿಂದ ಚನ್ನಶೆಟ್ಟಿ ಅಸ್ವಸ್ಥರಾಗಿದ್ದು, ಅವರನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Next Story