ಡಿವೈಎಸ್ಪಿ ಸಹಿತ ಹಲವರ ವರ್ಗಾವಣೆ
ಶಿವಮೊಗ್ಗ, ಫೆ.12: ಉಪವಿಭಾಗದ ಡಿವೈಎಸ್ಪಿ ಉಮೇಶ್ ನಾಯ್ಕ್ ಅವರನ್ನು ಶಿವಮೊಗ್ಗ ಡಿಸಿಆರ್ಬಿಗೆ ವರ್ಗಾವಣೆ ಮಾಡಲಾಗಿದೆ. ಈ ಜಾಗಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಉಪವಿಭಾಗದ ಪ್ರೊಬೆಷನರಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್ ಜಿ.ಮುನ್ನೋಳಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಎಂ.ಸುನೀಲ್ ಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ವಲಯ ಐಜಿಪಿ ಕಚೇರಿಗೆ ವರ್ಗಾವಣೆ ಮಾಡಿದ್ದು, ಈ ಜಾಗಕ್ಕೆ ಕೆ.ವಿ ಕೃಷ್ಣಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ. ದೊಡ್ಡಪೇಟೆ ವೃತ್ತದಿಂದ ಸಿಪಿಐ ಆರ್.ವಸಂತ್ ಕುಮಾರ್ ಅವರನ್ನು ಮೇಲ್ದರ್ಜೆಗೇರಿದ ದೊಡ್ಡಪೇಟೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
Next Story