ಚಿಂತಾಮಣಿ: ಸಿಡಿಲು ಬಡಿದು ಮನೆ ಕುಸಿತ; ನಾಲ್ವರು ಮಕ್ಕಳು ಸೇರಿ 7 ಮಂದಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ, ಎ.22: ಸಿಡಿಲು ಬಡಿದ ಪರಿಣಾಮ ಚಪ್ಪಡಿಕಲ್ಲಿನ ಮನೆಯೊಂದು ಕುಸಿದು ಬಿದ್ದು, ಮನೆಯಲ್ಲಿದ್ದ 4 ಮಕ್ಕಳು ಸೇರಿ 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಂದು ಸಂಜೆ ತುಂತುರು ಮಳೆ ಶುರುವಾಗಿದ್ದು, ಮಳೆಯ ನಡುವೆ ಸಿಡಿಲು ಬಡಿದ ಪರಿಣಾಮ ಗ್ರಾಮದ ಅಂಬರೀಶ್ ಹಾಗೂ ಗಾಯತ್ರಿ ದಂಪತಿಯ ಮನೆಗೆ ಸಿಡಿಲು ಹೊಡೆದು ಮನೆಯಲ್ಲಿದ್ದ 4 ಮಕ್ಕಳು ಸೇರಿ 7 ಮಂದಿಗೆ ಗಾಯಗಳಾಗಿವೆ.
ಜಗನ್ನ (60), ಅಂಬರೀಶ್ (32), ಗಾಯತ್ರಿ (28) ಗೌತಮ್ (3) ವಾಣಿಶ್ರೀ (6) ದರ್ಶನ್ (1) ಹಾಗೂ (4) ವರ್ಷದ ಲಾವಣ್ಯ ಗಾಯಾಳುಗಳು.
ಗಾಯಾಳುಗಳನ್ನು ಚಿಂತಾಮಣಿಯ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹಾಗೂ ತಹಶೀಲ್ದಾರ್ ಹನುಮಂತರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story