ಬಾಡಿಗೆದಾರರ ತೆರವು, ಉದ್ಯೋಗದಿಂದ ವಜಾ, ವೇತನ ಕಡಿತ ಮಾಡಬೇಡಿ: ಸರಕಾರದ ಮುಖ್ಯ ಕಾರ್ಯದರ್ಶಿ
ಬೆಂಗಳೂರು, ಎ. 20: ಕೋವಿಡ್ ಕರ್ಫ್ಯೂ ಅವಧಿಯಲ್ಲಿ ಅಂಗಡಿ, ಮನೆ ಮಾಲಕರು ಬಾಡಿಗೆದಾರರ ತೆರವು, ಉದ್ಯೋಗದಾತರು ಉದ್ಯೋಗಸ್ಥರನ್ನು ಕೆಲಸದಿಂದ ವಜಾ ಹಾಗೂ ಅವರ ವೇತನ ಕಡಿತಗೊಳಿಸದಿರಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮನವಿ ಮಾಡಿದ್ದಾರೆ.
ಗುರುವಾರ ಈ ಸಂಬಂಧ ಆದೇಶವೊಂದನ್ನು ಹೊರಡಿಸಿರುವ ಅವರು, ಮನೆ ಮಾಲಕರು ಮನೆಗಳನ್ನು, ಪಿಜಿ, ಅಂಗಡಿಗಳನ್ನು ಬಾಡಿಗೆ ಅಥವಾ ಭೋಗ್ಯದ ಆಧಾರದ ಮೇಲೆ ನೀಡಿರುವ ಮೇಲ್ಕಂಡವರನ್ನು ತೆರವುಗೊಳಿಸಲು ಕ್ರಮ ವಹಿಸಿರುವುದು ಸರಕಾರದ ಗಮನಕ್ಕೆ ಬಂದಿದೆ. ಆದುದರಿಂದ ಸದರಿ ವಾಸದಿಂದ ಬಲವಂತವಾಗಿ ತೆರವುಗೊಳಿಸಬಾರದು ಎಂದು ಕೋರಿದ್ದಾರೆ.
Next Story