ಇಸ್ಪೀಟ್ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಯುವಕನ ಬಾಯಿಗೆ ಶೂ ಇಟ್ಟು ಪಿಎಸ್ಐ ಹಲ್ಲೆ: ಯುವಕನ ತಂದೆಯ ಆರೋಪ
ವಿಜಯಪುರ, ಮೇ 29: ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಯುವಕನ ಮೇಲೆಯೇ ಪಿಎಸ್ಐಯೊಬ್ಬರು ಬಾಯಲ್ಲಿ ಶೂ ಇಟ್ಟು ಹಲ್ಲೆಗೈದಿದ್ದಾರೆನ್ನಲಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ವರದಿಯಾಗಿದೆ.
ಇಂಡಿ ನಿವಾಸಿ ಸಂತೋಷ ನಂದ್ಯಾಳ ಹಲ್ಲೆಗೊಳಗಾದ ಯುವಕ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ಪಿಎಸ್ಐ ಮಾಳಪ್ಪ ಪೂಜಾರಿ ಯುವಕನ ಬಾಯಲ್ಲಿ ಶೂ ಇಟ್ಟು ಹಲ್ಲೆ ಮಾಡಿದ್ದಾರೆ ಎಂದು ಯುವಕನ ತಂದೆ ಗುರುಲಿಂಗಪ್ಪ ಆರೋಪಿಸಿದ್ದಾರೆ;.
'ಪಿಎಸ್ಐ ಜೊತೆ ಠಾಣಾ ಬೀಟ್ ಪೊಲೀಸ್ ಮಹೇಶ್ ಪವಾರ್ ಹಾಗೂ ಖಾಸಗಿ ವ್ಯಕ್ತಿ ಯಲಿಗಾರ ಕೂಡ ಮನಬಂದಂತೆ ಹಲ್ಲೆಗೈದು ಹೊರವಲಯದಲ್ಲಿ ಸಂತೋಷನನ್ನು ಎಸೆದು ಹೋಗಿದ್ದಾರೆ. ಕೇಸ್ ನೀಡಲು ಠಾಣೆಗೆ ಹೋದರೆ ನಮಗೆ ಬೆದರಿಕೆ ಹಾಕಿ ಕಳಿಸಿದ್ದಾರೆ' ಎಂದು ಗುರುಲಿಂಗಪ್ಪ ಆರೋಪ ಮಾಡಿದ್ದಾರೆ.
ನನ್ನ ಮಗನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
Next Story