ಅಣ್ಣೂರುಕೇರಿ ಸಿ.ಆರ್.ಪಿ.ಎಫ್.ಯೋಧ ಶಿವಕುಮಾರ್ ದೆಹಲಿಯಲ್ಲಿ ನಿಧನ
ಗುಂಡ್ಲುಪೇಟೆ, ಜು3: ಸಿ ಆರ್ ಪಿ ಎಫ್ ಯೋಧ ಶಿವಕುಮಾರ್ (33) ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದು ಶುಕ್ರವಾರ ಮೃತಪಟ್ಟಿದ್ದಾರೆ.
ತಾಲೂಕಿನ ಅಣ್ಣೂರುಕೇರಿ ಗ್ರಾಮದ ಯೋಧ ಶಿವಕುಮಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆ ಕರ್ತವ್ಯಕ್ಕೆ ರಜೆ ಹಾಕಿ ಗುರುವಾರ ತಡ ರಾತ್ರಿ ಊರಿಗೆ ಪ್ರಯಾಣ ಬೆಳೆಸಲು ದೆಹಲಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಶುಕ್ರವಾರ ಬೆಳಗಿನ ಜಾವ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಸಾವಿಗೆ ನಿಖರ ಕಾರಣ ಕಾರಣ ತಿಳಿದು ಬಂದಿಲ್ಲ.
2012 ರಲ್ಲಿ ಸಿ.ಆರ್.ಪಿ.ಎಫ್. ಆಯ್ಕೆಯಾಗಿದ್ದು 2012 ರಿಂದ2019 ವರಗೆ ಹೈದರಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 2019 ರಿಂದ ಇಲ್ಲಿಯವರಗೆ ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2015 ರಲ್ಲಿ ಅಣ್ಣೂರು ಕೇರಿ ಗ್ರಾಮದ ಸುಮಿತ್ರಾ ಜೊತೆಯಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು , ಒಂಬತ್ತು ತಿಂಗಳ ಮಗುವನ್ನು ನೋಡಲು ಊರಿಗೆ ಆಗಮಿಸುವಾಗ ಸಾವನ್ನಪಿದ್ದಾರೆ.
ಪಾರ್ಥಿವ ಶರೀರ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ.
ಸಿಆರ್ ಪಿಎಫ್ ಯೋಧರ ತಂಡ ಪಾರ್ಥಿವ ಶರೀರವನ್ನು ನಾಳೆ ಯೋಧ ಶಿವಕುಮಾರ್ ಸ್ವಗ್ರಾಮ ಅಣ್ಣೂರುಕೇರಿಗೆ ತರಲಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆಗೆ ಅಂತ್ಯಸಂಸ್ಕಾರ ನೆರವೇರಲಿದೆ.